ಜಮ್ಮು-ಕಾಶ್ಮೀರ : ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ನೆಲೆಗಳ ಮೇಲೆ ಷೆಲ್ ದಾಳಿ ನಡೆಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಇದು ಮೂರನೇ ದಾಳಿಯಾಗಿದೆ. ಬಿ.ಎಸ್.ಎಫ್ ಪಡೆಗಳ 20 ನೆಲೆಗಳ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸಿವೆ. ಮಧ್ಯರಾತ್ರಿಯಿಂದಲೂ ನಡೆದಿರುವ ಮೋಟರ್ ಷೆಲ್ ದಾಳಿ ಬೆಳಿಗ್ಗೆಯೂ ಮುಂದುವರೆದಿದೆ. ಬಿ.ಎಸ್.ಎಫ್ ಯೋಧರಿಂದಲೂ ಪ್ರತಿದಾಳಿ ಮುಂದುವರೆದಿದೆ.
ಕಲೆದ 10 ದಿನಗಳಲ್ಲಿ ಜಮ್ಮು-ಕಾಶ್ಮೀರದ ಗಡಿ ರೇಖೆಯಲ್ಲಿ `11 ಬಾರಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿ, ಆರ್.ಎಸ್.ಪುರ ಬಳಿ ಹಲವು ಭಾರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಆ.25ರಂದು ಇಸ್ಲಾಮಾಬಾದ್ ನಲ್ಲಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಹಾಗೂ ಪಾಕ್ ಸಹವರ್ತಿ ಅಜೀಜ್ ಅಹ್ಮದ್ ಚೌಧರಿ ಕಳೆದ ಒಂದುವರೆ ವರ್ಷದ ನಂತರ ಮೊದಲ ಬಾರಿಗೆ ಮಾತುಕತೆ ನಡೆಸಲಿದ್ದಾರೆ.