BW News Bureau : ಕನ್ನಡ ಮಾಧ್ಯಮ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿಗಳಾದ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆದ ಸಮಾರಂಭದಲ್ಲಿ ಶಾಸನ ಶಾಸ್ತ್ರ ಡಿಪ್ಲೋಮಾ ,ಪ್ರವೇಶ, ಕಾವ,ಜಾಣ ,ರತ್ನ ಪರೀಕ್ಷೆಗಳಲ್ಲಿ ರಾಂಕ್ ಪಡೆದವರನ್ನು ಹಾಗೂ ಎಸ್ ಎಸ್ ಎಲ್ ಸಿ ,ಪಿಯುಸಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದವರನ್ನೂ ಸನ್ಮಾನಿಸಿ ನಂತರ “ಕನ್ನಡ ಮಾಧ್ಯಮ ಸಾಧನೆಗೆ ಅಡ್ಡಿಯಾಗುವುದಿಲ್ಲ ಓದುವ ಹವ್ಯಾಸ ಯಾವಾಗಲೂ ಒಳ್ಳೆಯದು, ಜ್ಞಾನ ವೃದ್ಧಿಗಾಗಿ ಓದಿನ ಅಗತ್ಯವಿದೆ .ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ” ಎಂದರು.
ಶಾಸನ ಶಾಸ್ತ್ರ ಡಿಪ್ಲೋಮಾದಲ್ಲಿ ಪ್ರಥಮ ರ್ಯಾಂಕ್ ಪಡೆದ ಬೆಳ್ಳಾರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಅಭಿನಂದನೆಯನ್ನು ಸ್ವೀಕರಿಸಿ ಶಾಸನ ಶಾಸ್ತ್ರದ ಮಹತ್ವ ಅಧ್ಯಯನದ ಅವಶ್ಯಕತೆಯ ಬಗ್ಗೆ ಮಾತನಾಡಿ ತಮಗೆ ಅದರಿಂದ ಆದ ಪ್ರಯೋಜನವನ್ನು ತಿಳಿಸಿ ಶಾಸನ ಶಾಸ್ತ್ರ ತರಗತಿಯ ಗುರುಗಳಾದ ಡಾ.ದೇವರ ಕೊಂಡಾ ರೆಡ್ಡಿ ,ಡಾ.ದೇವರಾಜ ಸ್ವಾಮಿ , ಡಾ.ಪಿ ವಿ ಕೃಷ್ಣ ಮೂರ್ತಿ , ಗಣೇಶ ಕೆ ಆರ್ ಮೊದಲಾದವರನ್ನು ನೆನೆದು ಕೃತಜ್ಞತೆ ಅರ್ಪಿಸಿದರು .
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುಂಡರೀಕ ಹಾಲಂಬಿ ,ಕಾರ್ಯ ದರ್ಶಿಗಳಾದ ರಾಮೇ ಗೌಡ ಮೊದಲಾದವರು ಉಪಸ್ಥಿತರಿದ್ದರು.