BW News Bureau : ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ವತಿಯಿಂದ ಸಾವಿರಕ್ಕೂ ಅಧಿಕ ಬಸ್ ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.
ಹಬ್ಬದ ಬೆನ್ನಲ್ಲೇ ವಾರದ ರಜೆ ಕೂಡ ಬಂದಿರುವುದರಿಂದ ರಾಜ್ಯದ ವಿವಿಧ ಕಡೆಗಳಲ್ಲಿ ಸಂಚಾರ ಒತ್ತಡಕ್ಕೆ ಅನುಗುಣವಾಗಿ ಆ.27 ಹಾಗೂ 28ರಂದು ಸಾವಿರಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೇ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಾಪುರ, ಶಿರಸಿ, ಕಾರವಾರ ಮತ್ತಿತರ ಕಡೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದಕಡೆಗೆ ಸಂಚರಿಸಲಿದೆ.
ಶಾಂತಿನಗರದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶದಕಡೆಗೆ, ಜೆ.ಪಿ.ನಗರ, ಜಯನಗರ ನಾಲ್ಕನೇ ಬ್ಲಾಕ್ ಮತ್ತು ಒಂಭತ್ತನೇ ಬ್ಲಾಕ್ ಮತ್ತಿತರ ಕಡೆಗಳಿಂದ ಕೂಡ ಹೆಚ್ಚುವರಿ ಬಸ್ ಬೀಡಲಾಗುತ್ತಿದೆ.
ವಾಯವ್ಯ ಕರ್ನಾಟಕ ಪ್ರದೇಶಗಳಾದ ಹುಬ್ಬಳ್ಳಿ-ಧಾರವಾಡ, ವಿಜಾಪುರ, ಗೋಕರ್ಣ, ಶಿರಸಿ ಹಾಗೂ ಈಶಾನ್ಯ ಕರ್ನಾಟಕದ ಪ್ರದೇಶಗಳಾದ ಗುಲ್ಬರ್ಗಾ, ಬಳ್ಳಾರಿ, ರಾಯಚೂರು, ಹೊಸಪೇಟೆ, ಕೊಪ್ಪಳ ಮೊದಲಾದಕಡೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಲಾದ ಬಸ್ ಗಳು ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಿಂದ ಹೊರಡುತ್ತದೆ.
ಇ-ಬುಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಕಾಯ್ದಿರಿಸಲಾದ ಟಿಕೆಟ್ ಗಳ ಮೇಲೆ ನಮೂದಿಸಿದ ಬಸ್ ನಿಲ್ದಾಣ, ಪಿಕ್ ಅಪ್ ಪಾಯಿಂಟ್ ಹೆಸರುಗಳನ್ನು ಗಮನಿಸಬೇಕು.
ನಗರದಲ್ಲಿ 173, ಮೈಸೂರಿನಲ್ಲಿ 14, ಮಂಗಳೂರಿನಲ್ಲಿ 54 ಹಾಗೂ ಇತರೆಡೆ 230 ಗಣಕೀಕೃತ ಟಿಕೆಟ್ ಬುಕಿಂಗ್ ಕೌಂಟರ್ ತೆರೆಯಲಾಗಿದೆ.