Untitled Document
Sign Up | Login    
Dynamic website and Portals
  
August 27, 2014

ಲವ್ ಜಿಹಾದ್: ಶೂಟಿಂಗ್ ಚಾಂಪಿಯನ್ ತಾರಾ ಸಹದೇವ್ ಪತಿ ಬಂಧನ

ಶೂಟಿಂಗ್ ಚಾಂಪಿಯನ್ ತಾರಾ ಸಹದೇವ್ ಶೂಟಿಂಗ್ ಚಾಂಪಿಯನ್ ತಾರಾ ಸಹದೇವ್

ರಾಂಚಿ : ರೈಫಲ್ ಶೂಟಿಂಗ್ ರಾಷ್ಟ್ರೀಯ ಚಾಂಪಿಯನ್ ತಾರಾ ಸಹದೇವ್ ಅವರನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಪೀಡಿಸುತ್ತಿದ್ದ ಪತಿ ರಂಜಿತ್ ಕುಮಾರ್ ಕೊಹ್ಲಿ ಅಲಿಯಾಸ್ ರಕಿಬುಲ್ ಹಸನ್‌ ನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಹಾಗೂ ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಕಿಬುಲ್ ಹಸನ್ ನನ್ನು ಬಂಧಿಸಲಾಗಿದೆ.

ತನ್ನನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಪತಿ ರಕಿಬುಲ್ ಹಸನ್ ಪೀಡಿಸುತ್ತಿದ್ದಾನೆ ಎಂದು ಶೂಟಿಂಗ್ ಚಾಂಪಿಯನ್ ತಾರಾ ಸಹದೇವ್, ಪೊಲೀಸರಿಗೆ ದೂರು ನೀಡಿದ್ದರು. ರಕಿಬುಲ್ ಬಂಧನಕ್ಕಾಗಿ 4 ಜನ ಪೊಲೀಸ್ ತಂಡವನ್ನು ರಚನೆ ಮಾಡಲಾಗಿತ್ತು.

ರಂಜಿತ್ ಕುಮಾರ್ ಕೋಹ್ಲಿ, ಮೂಲತಃ ಹಿಂದೂ ಆಗಿದ್ದು, ಇಸ್ಲಾಂ ಧಾರ್ಮಿಕ ಮುಖಂಡರ ಸಂಪರ್ಕ ದೊರೆತ ನಂತರ ಕುರಾನ್ ನಲ್ಲಿ ಆಸಕ್ತಿ ಬೆಳೆಸಿಕೊಂಡು ಇಸ್ಲಾಂ ಗೆ ಮತಾಂತರವಾಗಿದ್ದ. ತಾನು ಮತಾಂತರವಾಗುವುದು ಸಾಲದೆಂಬಂತೆ ಪತ್ನಿ ತಾರಾ ಸಹದೇವ್ ಅವರನ್ನೂ ಮತಾಂತರವಾಗಲು ಒತ್ತಾಯಿಸುತ್ತಿದ್ದ ಎಂದು ರಾಂಚಿ ಡಿ.ಐ.ಜಿ ತಿಳಿಸಿದ್ದಾರೆ.

ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಂಜಿತ್ ಕುಮಾರ್ ಕೋಹ್ಲಿ ಅವರ ತಾಯಿ ಮೂಲತಃ ಮುಸ್ಲಿಂ ಎಂದು ತಿಳಿದುಬಂದಿದೆ. ವಿವಾಹದ ಸಂದರ್ಭದಲ್ಲಿ ರಂಜಿತ್ ಕುಮಾರ್ ತಾಯಿ, ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಆಕೆಯ ಪತಿ ಸಾವನ್ನಪ್ಪಿದ ಬೆನ್ನಲ್ಲೇ ಮುಸ್ಲಿಂ ಧರ್ಮಕ್ಕೆ ಮತ್ತೊಮ್ಮೆ ಮತಾಂತರಗೊಂಡಿರುವ ಅಂಶ ಬಯಲಾಗಿದೆ. 2007ರಲ್ಲಿ ರಂಜಿತ್ ಕುಮಾರ್ ಕೋಹ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಕಳೆದ ಜುಲೈ ತಿಂಗಳಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ತಾರಾ ಸಹದೇವ್ ಹಾಗೂ ರಂಜಿತ್ ಕುಮಾರ್ ಇಬ್ಬರು ಮದುವೆಯಾಗಿದ್ದರು.

ಮದುವೆಯಾದ ದಿನ ತಾರಾಗೆ ಪತಿ ಮುಸ್ಲಿಂ ಎಂದು ಗೊತ್ತಾಗಿ ಆಘಾತಗೊಂಡಿದ್ದಾಳೆ. ಮದುವೆಯಾದ ಮರುದಿನವೇ 20-25 ಖಾಜಿಗಳನ್ನು ಮನೆಗೆ ಕರೆದ ರಕಿಬುಲ್ ಆಕೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಳಾಗುವಂತೆ ಬಲವಂತ ಮಾಡಿದ್ದಾನೆ. ಆದರೆ ಬಲವಾಗಿ ಪ್ರತಿಭಟಿಸಿದಾಗ ದೈಹಿಕ ಹಿಂಸೆ ನೀಡಿರುವುದಾಗಿ ತಾರಾ ಆರೋಪಿಸಿದ್ದಾರೆ.

ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಆಕೆಯನ್ನು ಒಂದು ತಿಂಗಳ ಕಾಲ ಬಂಧಿಸಿಟ್ಟಿದ್ದಾನೆ. ಆಕೆಯ ದೇಹದ ಮೇಲೆ ಆತ ನೀಡಿದ ದೈಹಿಕ ಶೋಷಣೆಯಿಂದಾದ ಗಂಭೀರ ಗಾಯದ ಗುರುತು ಕೂಡ ಪತ್ತೆಯಾಗಿದೆ.

ತಾರಾ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದ ಸ್ಥಳಕ್ಕೆ ತನ್ನ ಮೂವರು ಸಹಚರರೊಂದಿಗೆ ಬರುತ್ತಿದ್ದ ರಕಿಬುಲ್, ತಾರಾರನ್ನು ಭೇಟಿ ಮಾಡುತ್ತಿದ್ದ. ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿ ತಾರಾ ಕಳೆದ ಜುಲೈ 7 ರಂದು ಆತನನ್ನು ಮದುವೆಯಾಗಿದ್ದಳು. ಲವ್ ಜಿಹಾದ್ ಗೆ ಇದೊಂದು ಉತ್ತಮ ಉದಾಹರಣೆಯಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited