ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೇನೆಯಿಂದ ಒಂದೆಡೆ ಗುಂಡಿನ ದಾಳಿ ಮುಂದುವರೆದರೆ ಇನ್ನೊಂದೆಡೆ ಉಗ್ರರ ದಾಳಿ ಮುಂದುವರೆದಿದೆ. ಗಡಿಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಬಲಿಯಾಗಿದ್ದಾರೆ.
ಜಮ್ಮುವಿನ ಕುಪ್ವಾರ ಪ್ರದೇಶದಲ್ಲಿನ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಓರ್ವ ಬಿ.ಎಸ್.ಎಫ್ ಯೋಧ ಬಲಿಯಾಗಿದ್ದಾರೆ. ಇಬ್ಬರು ಯೋಧರಿಗೆ ಗಾಯಗಳಾಗಿವೆ. ಅಲ್ಲದೇ ಪಾಕ್ ಕದನ ವಿರಾಮ ಉಲ್ಲಂಘನೆ ಮುಂದುವರೆಸಿದೆ.
ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ವಾಗಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ. ಬೆಳಿಗ್ಗೆ ಪಾಕ್ ಸೈನಿಕರು ನಡೆಸಿದ ದಾಳಿಯಿಂದ ಆರ್.ಎಸ್.ಪುರ, ಕುಪ್ವಾರ ಪ್ರದೇಶಗಳಲ್ಲಿನ ಸಾವಿರಾರು ನಿವಾಸಿಗಳು ಮನೆಯಿಂದ ಹೊರಬರಲಾಗದೇ ಪ್ರಾಣ ಭೀತಿಯಿಂದ ಕಾಲ ಕಳೆಯುವಂತಾಗಿದೆ. ಹಲವು ಗ್ರಾಮಗಳಲ್ಲಿ ಅಘೋಷಿತ ಕರ್ಫ್ಯೂ ವಿನಂತೆ ಕಂಡುಬರುತ್ತಿದೆ.
ಈ ನಡುವೆ ಪಾಕಿಸ್ತಾನ ಮತ್ತು ಭಾರತ ಉಭಯ ರಾಷ್ಟ್ರಗಳ ಸೇನಾಪಡೆಗಳು ಧ್ವಜ ವಂದನೆ ಕಾರ್ಯಕ್ರಮ ನಡೆಸಿದ್ದು, ಈ ವೇಳೆ ಭಾರತೀಯ ಸೇನಾಧಿಕಾರಿಗಳು ಪಾಕ್ ಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಿರುವುದು ಸರಿಯಲ್ಲ ಎಂದು ತೀಕ್ಷ್ಣ್ಣವಾಗಿ ತಿಳಿಸಿದ್ದು, ಇಅದಕ್ಕೆ ಪಾಕ್ ಸೇನಾಧಿಕಾರಿಗಳು ಇನ್ನುಮುಂದೆ ಹೀಗಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿಉದೆ.