BW News Bureau : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ 20 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.
ಪಾಲಿಕೆಯ ಅವಧಿ ಕೇವಲ 6 ತಿಂಗಳಿದ್ದರೂ 20 ಮಂದಿಯನ್ನು ನಾಮ ನಿರ್ದೇಶನ ಮಾಡಲಾಗಿದೆ.
ಕೆ.ಆರ್ ಪುರಂ ನ ಹೆಚ್.ಎಸ್ ಸೈಯಿದ್ ಅಮಾನುಲ್ಲಾ, ಯಶವಂತಪುರದ ಹೆಚ್. ರಾಮಮೂರ್ತಿ, ದಾಸರಹಳ್ಳಿಯ ಜಿ.ಎಸ್ ಕೃಷ್ಣಮೂರ್ತಿ ಮಹಾದೇವಪುರದ ಭಾಸ್ಕರ್ ರೆಡ್ಡಿ, ಬೊಮ್ಮನಹಳ್ಳಿಯ ಕೆ.ವಿ ಪಟೇಲ್ ರಾಜು, ಮಹಾಲಕ್ಷ್ಮಿ ಲೇಔಟ್ ನ ಜಿ. ಆನಂದ ಮೂರ್ತಿ, ಪುಲಕೇಶಿನಗರದ ನೂರ್ ಜಾನ್, ಸಿ.ವಿ ರಾಮನ್ ನಗರದ ಕೆ.ಮಂಜುನಾಥ್ ಶಾಂತಿನಗರದ ಎ.ಬಿ ಖದೀರ್ ಹಾಜಿ, ರಾಜಾಜಿನಗರದ ಹೆಚ್ ವಿಜಯ ಕುಮಾರ್, ಪಾಲಿಕೆಗೆ ನಾಮನಿರ್ದೇಶನಗೊಂಡಿದ್ದಾರೆ.
ಚಿಕ್ಕಪೇಟೆಯ ಎನ್.ಅಮರೇಶ್, ವಿಜಯನಗರದ ಟಿ.ರಮೇಶ್, ಶಿವಾಜಿನಗರದ ಜೆ. ನಟರಾಜ್, ಪದ್ಮನಾಭ ನಗರದ ಲಕ್ಷ್ಮಿಪತಿ ಜಯನಗರದ ಆರ್.ಶೋಭಾ ಸರ್ವಜ್ನನಗರದ ಡಿ.ರಘು, ಗಾಂಧಿನಗರದ ಎಲ್.ಲಿಂಗಯ್ಯ, ಬಿಟಿಎಂ ಲೇಔಟ್ ನ ಸಂಪತ್, ಮಲ್ಲೇಶ್ವರಂ ನ ಕೆ.ಇ ಹರೀಶ್ ಅವರನ್ನೂ ಸಹ ಬಿಬಿಎಂಪಿಗೆ ನಾಮನಿರ್ದೇಶನ ಮಾಡಲಾಗಿದೆ.