ಶ್ರೀನಗರ : ಜಮು-ಕಾಶ್ಮೀರ ಶತಮಾನದ ಪ್ರವಾಹ ಪರಿಸ್ಥಿತಿಯಿಂದ ನಲುಗಿ ಹೋಗಿದ್ದರೂ, ತಮ್ಮ ಸಣ್ಣತನದ ಮೂಲಕ ಪ್ರತ್ಯೇಕತಾವಾದಿ ಮುಖಂಡರು ಭಾರತೀಯ ಸೇನೆ ನಡೆಸುತ್ತಿರುವ ಪರಿಹಾರ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ.
ಪ್ರತ್ಯೇಕತಾವಾದಿ ನಾಯಕ, ಜಮು-ಕಾಶ್ಮೀರ ಮುಕ್ತಿ ರಂಗ (ಜೆಕೆ ಎಲ್ ಎಫ್) ಮುಖಂಡ ಯಾಸಿನ್ ಮಲಿಕ್, ತನ್ನ ಕೆಲ ಸಹವರ್ತಿಗಳೊಂದಿಗೆ ಸೇನೆಯ ಪರಿಹಾರ ದೋಣಿಗಳನ್ನು ಕಸಿದುಕೊಂಡು ಅದರಲ್ಲಿ ತಾನು ಸಂಚರಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾನೆ.
ಅಲ್ಲದೇ ಸೇನೆ ನಡೆಸುವ ಪರಿಹಾರ ಕಾರ್ಯಕ್ಕೆ ಸಹಕಾರ ನೀಡಬೇಡಿ ಎಂದು ಸ್ಥಳೀಯರಿಗೆ ತಾಕೀತು ಮಾಡಿದ್ದಾನೆ. ಸೇನೆಯ ಪರಿಹಾರ ಸಾಮಗ್ರಿಗಳನ್ನು ಚೆಲ್ಲಿದ್ದಾನೆ. ಬಳಿಕ ಸೇನೆಯ ದೋಣಿಯಲ್ಲಿ ತಾನು ಪರಿಹಾರ ಕಾರ್ಯವನ್ನು ಕೈಗೊಂಡಿದ್ದಾನೆ ಎಂದು ಪರಿಹಾರ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಯಾಸಿನ್ ಮಲಿಕ್ ಪರಿಹಾರ ಕಾರ್ಯದ ದೋಣಿಯಲ್ಲಿ ಸಾಗುತ್ತಿರುವ ವಿಡಿಯೋ ದೃಶ್ಯ ಲಭ್ಯವಾಗಿದೆ.