BW News Bureau : 'ಭಾರತೀಯ ವಿದ್ಯಾಭವನ' ಪ್ರಕಟಿತ ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ ಮಾಲಿಕೆಯ ಇ-ಪುಸ್ತಕ ಬಿಡುಗಡೆ ಸಮಾರಂಭ ಸೆ.25ರಂದು ನಡೆಯಲಿದೆ.
ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಇ ಪುಸ್ತಕ ಮಾಲಿಕೆಯ ಕನ್ನಡದ 25 ಭಾಗ ಹಾಗೂ ಇಂಗ್ಲೀಷ್ ನ 11 ಭಾಗಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಇತಿಹಾಸ ಮಾಲಿಕೆಯ ಇ-ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ರುಡಭಾಯಿ ವಾಲ, ನಿವೃತ್ತ ರಾಜ್ಯಪಾಲ ರಾಮಾಜೋಯಿಸ್, ಬಿಡುಗಡೆಯಾಗಲಿರುವ ಮಾಲಿಕೆಯ ಕನ್ನಡ ಆವೃತ್ತಿಯ ಸಂಪಾದಕರಾದ ಡಾ.ಎ.ವಿ ನರಸಿಂಹ ಮೂರ್ತಿ ಅವರು ಭಾಗವಹಿಸಲಿದ್ದಾರೆ.
ಇತಿಹಾಸಪೂರ್ವ ಹಾಗೂ ಆಧುನಿಕ ಭಾರತದ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ಮಾಲಿಕೆ ಡಾ.ಕೆ.ಎಂ ಮುನ್ಷಿ ಅವರ ಪರಿಕಲ್ಪನೆಯಾಗಿದೆ.
ಇತಿಹಾಸ ತಜ್ನ ರಮೇಶ್ ಚಂದ್ರ ಮಜೂಂದಾರ್, ಅವರು ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ ಮಾಲಿಕೆಯ ಸಂಪಾದಕರಾಗಿದ್ದು, 26 ವರ್ಷ ಕಾಲಾವಧಿಯಲ್ಲಿ ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ ಮಾಲಿಕೆಯ ಯೋಜನೆ ಸಂಪೂರ್ಣಗೊಂಡಿದೆ. ಭಾರತೀಯ ಇತಿಹಾಸದ ಬಗ್ಗೆ ಮಾಹಿತಿ ನೀಡುವ ಅಧಿಕೃತ ದಾಖಲೆಯೆಂದೇ ಇತಿಹಾಸ ಮಾಲಿಕೆಯನ್ನು ಪರಿಗಣಿಸಲಾಗಿದೆ.