ಬೆಂಗಳೂರು : ಭಾರತದ ಮಹತ್ವಾಕಾಂಕ್ಷಿ ಮಂಗಳಯಾನ ಯಶಸ್ವಿಯಾಗಿದೆ. ಮಾಮ್ ನೌಕೆ ಯಶಸ್ವಿಯಾಗಿ ಮಂಗಳನ ಕಕ್ಷೆ ಸೇರಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಬೆಳಿಗ್ಗೆ 7.52ಕ್ಕೆ ಮಾಮ್ ನೌಕೆ ಮಂಗಳನ ಕಕ್ಷೆ ಸೇರಿತು. ಬೆಂಗಳೂರಿನ ಪೀಣ್ಯದಲ್ಲಿನ ಇಸ್ರೋ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ವೇಳೆ ಮಂಗಳಯಾನದ ಯಶಸ್ಸಿನ ಬಗ್ಗೆ ಪ್ರಧಾನಿ ಮೋದಿ ಹೆಮ್ಮೆಯ ಮಾತನಾಡಿದರು.
ಭಾರತದ ಮಹತ್ವಾಕಾಂಕ್ಷಿ ಯೋಜನೆ ಮಂಗಳಯಾನ ಯಶಸ್ವಿಯಾಗಿದೆ. ಮಂಗಳನಲ್ಲಿ ಮಾಮ್ ನೌಕೆ ಮಿಲನವಾಗಿದೆ. ಮೊದಲ ಹೆಜ್ಜೆಯಲ್ಲೇ ಭಾರತ ಯಶಸ್ಸು ಸಾಧಿಸಿದೆ. ನಮ್ಮ ವಿಜ್ನಾನಿಗಳು ಇಂದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಭಾರತ ಎಂದರು.
ಮಂಗಳ ನೌಕೆಗೆ ಚಿಕ್ಕದಾಗಿ ಮಾಮ್ ಎಂದು ಹೆಸರಿಡಲಾಗಿತ್ತು. ಮಂಗಳಯಾನ ಯಸಸ್ಸು ಸಾಧಿಸಲಿದೆ ಎಂಬ ವಿಶ್ವಾಸವಿತ್ತು. ಅತೀ ಕಡಿಮೆ ವೆಚ್ಚದಲ್ಲಿ ಭಾರತ ಮಹತ್ತರ ಸಾಧನೆ ಮಾಡಿದೆ ಎಂದು ಅಭಿಪ್ರಾಯಪಟ್ಟರು. ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ನಮ್ಮ ವಿಜ್ನಾನಿಗಳು ಇಂದು ಇತಿಹಾಸ ನಿರ್ಮಿಸಿದ್ದಾರೆ. ಇಸ್ರೋ ವಿಜ್ನಾನಿಗಳಿಗೆ ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಅಭಿನಂದನೆ ಸಲ್ಲಿಸುತೇನೆ. ಈ ಸಾಧನೆಗೆ ಪ್ರತಿ ಭಾರತೀಯನೂ ಹೆಮ್ಮೆಪಡಬೇಕು ಎಂದರು.
ಭಾರತ ಇಂದು ಪ್ರಪಂಚದ ಎಲ್ಲಾ ದೇಶವನ್ನು ಹಿಂದಿಕ್ಕಿದೆ. ಮಾನವನ ಕಲ್ಪನೆಗೂ ಮೀರಿದ ಸಾಧನೆ ಮಾಡಿದ್ದೇವೆ. ಮಂಗಳಯಾನ ನಿಜಕ್ಕೂ ಮಹತ್ತರವಾದ ಸಾಧನೆ. ಇಸ್ರೋ ವಿಜ್ನಾನಿಗಳಿಂಗೆ ಇಂತಹ ಸಾಧನೆ ಸಾಮಾನ್ಯವಾಗಿದೆ. ಅಸಾಧ್ಯವಾದದ್ದನ್ನು ಸಾಧಿಸುವುದು ಅಭ್ಯಾಸವಾಗಿಬಿಟ್ಟಿದೆ. ವಿಜ್ನಾನದ ಮೂಲಕ ಇನ್ನೂ ಹೆಚ್ಚಿನದನ್ನು ನಾವು ಸಾಧಿಸಬೇಕಿದೆ. ಇದಕ್ಕೆ ಮಂಗಳಯಾನವೇ ಸಾಕ್ಷಿ. ಪ್ರತಿಯೊಬ್ಬರ ಜೀವನದಲ್ಲಿ ವಿಜ್ನಾನ ಅಳವಡಿಸಿಕೊಳ್ಳಬೇಕು. ಮಂಗಳಯಾನದ ಯಶಸ್ಸು ಭಾರತದ ಶಕ್ತಿಯನ್ನು ತೋರುತ್ತದೆ ಎಂದು ಅಭಿಪ್ರಾಯಪಟ್ಟರು.
ಅತಿ ಕಡಿಮೆ ವೆಚ್ಚದಲ್ಲಿ ವಿಜ್ನಾನಿಗಳು ಈ ಸಾಧನೆ ಮಾಡಿದ್ದಾರೆ. ಹಾಲಿವುಡ್ ಚಿತ್ರವೊಂದರ ಬಜೆಟ್ ಗಿಂತಲೂ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಯಶಸ್ವಿಯಾಗಿದೆ. 450 ಕೋಟಿ ವೆಚ್ಚದಲ್ಲಿ ಈ ಯೋಜನೆ ನಿರ್ಮಿಸಲಾಗಿದೆ. ಈ ಯಸಸ್ಸಿನ ಮೂಲಕ ಅಭಿವೃದ್ಧಿ ರಾಷ್ಟ್ರಗಳತ್ತ ಭಾರತ ಇಂದು ಹೆಜ್ಜೆ ಇಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಮ್ ನೌಕೆ ನಿರ್ಮಾಣ ಅಭೂತಪೂರ್ವ. ಈ ಸಾಧನೆಗೈದ ಏಷ್ಯಾದ ಮೊದಲ ರಾಷ್ಟ್ರ ನಮ್ಮ ಭಾರತ. ಮಂಗಳನಯಾನ ಯಶಸ್ಸಿನ ಬಗ್ಗೆ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳು ಎದ್ದುನಿಂತು ವಿಜ್ನಾನಿಗಳಿಗೆ ಅಭಿನಂದನೆ ಸಲ್ಲಿಸಬೇಕು, ಚಪ್ಪಾಳೆ ಮೂಲಕ ಅಭಿನಂದನೆ ತಿಳಿಸಬೇಕು ಎಂದು ತಿಳಿಸಿದರು.
ಮಂಗಳಯಾನ ಯಶಸ್ವಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಸ್ರೋ ವಿಜ್ನಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾಸಾ ಕೂಡ ಇಸ್ರೋ ವಿಜ್ನಾನಿಗಳಿಗೆ ಅಭಿನಂದನೆ ಸಲ್ಲಿಸಿದೆ.
ಮಧ್ಯಾಹ್ನ 12.30ಕ್ಕೆ ಮಂಗಳ ನೌಕೆ ಮಂಗಳನ ಅಂಗಳದ ಕಲರ್ ಫೋಟೋವನ್ನು ಕಳುಹಿಸಲಿದೆ. ಆಂಧ್ರಪ್ರದೇಶ ಶ್ರೀಹರಿಕೋಟಾ ಇಸ್ರೋ ಕೇಂದ್ರದಿಂದ 2013, ನ.5ರಂದು ಮಂಗಳ ನೌಕೆಯನ್ನು ಉಡಾವಣೆ ಮಾಡಲಾಗಿತ್ತು.