ನವದೆಹಲಿ : 2014ನೇ ಸಾಲಿನ ಶಾಂತಿ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು ಭಾರತದ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದ ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಯೂಸೂಫ್ ಝೈ ಅವರಿಗೆ ಪ್ರಶಸ್ತಿ ದೊರೆತಿದೆ.
ಕೈಲಾಶ್ ಮಕ್ಕಳ ಹಕ್ಕು ಹೋರಾಟಗಾರರಾಗಿದ್ದು, ಎನ್.ಜಿ.ಓ ಸಂಸ್ಥೆಯ ಮೂಲಕ ಬಾಲ ಕಾರ್ಮಿಕ ಪದ್ದತಿಯ ವಿರುದ್ದ ಬಚ್ ಪನ್ ಬಚಾವೋ ಹೆಸರಿನಲ್ಲಿ ಭಾರೀ ಆಂಧೋಲನ ನಡೆಸಿದ್ದರು. ಮಕ್ಕಳ ಹಕ್ಕುಗಳ ಹೋರಾಟಗಾರಾಗಿ ಮಕ್ಕಳಿಗಾಗಿ ದುಡಿದಿದ್ದರು.
ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಕೈಲಾಶ್, ಪಕ್ಕಾ ಗಾಂಧಿವಾದಿಯಾಗಿದ್ದು ಮಹಾತ್ಮ ಗಾಂಧಿ ತತ್ವಗಳ ಮೂಲಕವೇ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ.
ಅದೇ ರೀತಿ ಪಾಕಿಸ್ತಾನ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಿರಂತರ ಹೋರಾಟ ನಡೆಸಿದ್ದ ಮಲಾಲಾ ಸೇರಿ ಜಂಟಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿದೆ. ಮಲಾಲಾ ತಾಲಿಬಾನ್ ಉಗ್ರರ ದಾಳಿಗೊಳಗಾಗಿ ಪಾರಾಗಿದ್ದರು.
ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಭಾರತೀಯ ಹಾಗೂ ಪಾಕಿಸ್ತಾನ ಮೂಲದವರಿಗೆ ನೀಡಲಾಗುತ್ತಿದ್ದು, ಮಕ್ಕಳ ಹಕ್ಕುಗಳಿಗಾಗಿ ಈ ಇಬ್ಬರು ನಿರಂತರವಾಗಿ ದುಡಿಯುತ್ತಿದ್ದಾರೆ ಎಂದು ನೊಬೆಲ್ ಸಮಿತಿ ತಿಳಿಸಿದೆ.