ಹರ್ಯಾಣ : ವಿಧಾನಸಭಾ ಚುನಾವಣೆ ಮತದಾನದ ನಡುವೆ ಬಿಜೆಪಿ ಮತ್ತು ಐಎನ್ ಎಲ್ ಡಿ ಪಕ್ಷಗಳ ನಡುವೆ ಘರ್ಷಣೆ ಸಂಭವಿಸಿ ಗುಂಡಿನ ದಾಳಿ ನಡೆದಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1:30ರ ವರೆಗೆ ಮಹಾರಾಷ್ಟ್ರದಲ್ಲಿ ಶೇ.20ರಷ್ಟು ಮತದಾನವಾಗಿದ್ದರೆ ಹರ್ಯಾಣದಲ್ಲಿ ಶೇ.40ರಷ್ಟು ಮತದಾನವಾಗಿದೆ.
ಈ ನಡುವೆ ಹರ್ಯಾಣದ ಸಿರ್ಸಾ ವಿಧಾನಸಭಾ ಕ್ಷೇತ್ರದ ಮೋಡಿಯಾ ಖೇಡಾ ಮತಗಟ್ಟೆಯಲ್ಲಿ ಬಿಜೆಪಿ ಮತ್ತು ಐಎನ್ ಎಲ್ ಡಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.
ಪರಸ್ಪರ ವಾಗ್ವಾದ ವಿಕೋಪಕ್ಕೆ ತುರುಗಿ ಐಎನ್ ಎಲ್ ಡಿ ಕಾರ್ಯಕರ್ತನೊಬ್ಬರ ಮೇಲೆ ಗುಂಡಿನ ದಾಳಿ ನಡೆಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಸುನಿತಾ ಕುಟುಂಬಸ್ಥರ ವಿರುದ್ಧ ದಾಳಿಯ ಆರೋಪ ಕೇಳಿಬಂದಿದೆ.