ಪಾಲಕ್ಕಾಡ್ : ಪ್ರಮುಖ ರಾಜಕೀಯ ಪಕ್ಷಗಳ ಸುಮಾರು 1500 ಜನರು ಪಾಲಕ್ಕಾಡ್ ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಷ್ಟು ದೊಡ್ಡಮಟ್ಟದಲ್ಲಿ ಪಕ್ಷಾಂತರಗೊಂಡಿರುವುದನ್ನು ರಾಜಕೀಯ ಗುಳೆ ಎಂದೇ ಹೇಳಲಾಗುತ್ತಿದೆ.
ಪಾಲಕ್ಕಾಡ್ ನಲ್ಲಿ ನಡೆದ ನವಸಂಗಮಂ ಎಂಬ ಸಭೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಬಿಜೆಪಿಗೆ ಪಕ್ಷಾತಂತರಗೊಂಡಿರುವುದು ವಿಶೇಷ. ಇವರಲ್ಲಿ ಹೆಚ್ಚಿನವರು ಸಿಪಿಎಂ ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಈ ಹಿಂದೆ ಮನ್ನಾರ್ಕ್ಕಾಡ್ ಗ್ರಾಮೀಣ ಕೋ-ಆಪರೇಟಿವ್ ಬ್ಯಾಂಕ್ ನ ಉಪಾಧ್ಯಕ್ಷನಾಗಿ ಸೇವೆ ಸಲ್ಲಿದ್ದ ಸಿಪಿಎಂ ನ ಮಾಜಿ ಶಾಖಾ ಕಾರ್ಯದರ್ಶಿ ಟಿ ಎನ್ ಪ್ರಭಾಕರ್, ಕೇಸರಿ ಪಕ್ಷ ಸೇರಿರುವವರಲ್ಲಿ ಪ್ರಮುಖರು. ಇದಲ್ಲದೆ ಕಾಂಗ್ರೆಸ್ ನ ಹಲವು ನಾಯಕರು ಕೂಡ ತಮ್ಮ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಮಿತಿಯ ಸದಸ್ಯ ಸಿ.ಕೆ.ಪದ್ಮನಾಭನ್ ಈ ಹೊಸ ಸದಸ್ಯರನ್ನು ಆತ್ಮೀಯವಗೈ ಬರಮಾಡಿಕೊಂಡರು. ಬಿಜೆಪಿಗೆ ಸೇರ್ಪಡೆಗೊಂಡ ಎಲ್ಲರೂ ಭಾರತೀಯ ಜನತಾ ಪಾರ್ಟಿಯ ಯೋಜನೆಗಳು, ಪಕ್ಷದ ನೀತಿಯನ್ನು ಒಪ್ಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.