ಬೆಂಗಳೂರು : 'ದೀಪಾವಳಿ' ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಬಹುದಾದ ಅನಾಹುತದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರತಿವರ್ಷದಂತೆ ಈ ಬಾರಿಯೂ ಪಾಟಾಕಿ ಅವಘಡದಿಂದ ಗಾಯಗೊಂಡವರ ಸಂಖ್ಯೆ ಏರುತ್ತಲೇ ಇದೆ.
ಬೆಂಗಳೂರಿನಲ್ಲಿ ಈ ವರೆಗೂ 25 ಜನರು ಪಟಾಕಿ ಸಿಡಿಸುವ ವೇಳೆ ಗಾಯಗೊಂಡಿದ್ದಾರೆ. ಅಷ್ಟೂ ಜನರಿಗೂ ಕಣ್ಣಿಗೆ ಗಂಭೀರ ಗಾಯಗಳುಂಟಾಗಿವೆ. ಗಾಯಗೊಂಡಿರುವ ಪೈಕಿ 5 ಜನರಿಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಉಳಿದ 19 ಜನರಿಗೆ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಟಾಕಿ ದುರಂತದಲ್ಲಿ 4 ಜನರ ಕಣ್ಣಿಗೆ ಗಂಭೀರ ಗಾಯಗಳುಂಟಾಗಿರುವ ಪರಿಣಾಮ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪಟಾಕಿ ದುರಂತಗಳ ಬಗ್ಗೆ ಎಷ್ಟೇ ಜನ ಜಾಗೃತಿ ಮೂಡಿಸಿದರೂ ಸಹ ಪ್ರತಿ ವರ್ಷದಂತೆ ಈ ಬಾರಿಯೂ ಪಟಾಕಿ ದುರಂತದಿಂದ ಹಲವರು ಕಣ್ಣು ಕಳೆದುಕೊಂಡಿದ್ದಾರೆ.