Rajajinagar : 'ಬಸವೇಶ್ವರ ನಗರ'ದಲ್ಲಿರುವ ಶಂಕರಮಠದ ಬಳಿ 3 ಅಂತಸ್ಥಿನ ಮನೆಯೊಂದು 2 ಅಂತಸ್ಥಿನ ಮನೆ ಮೇಲೆ ಕುಸಿದು ಬಿದ್ದ ಘಟನೆ ಅ.30ರಂದು ನಡೆದಿದೆ.
ಬೆಳಗ್ಗೆ ಸಂಭವಿಸಿದ ಈ ಅನಾಹುತದಲ್ಲಿ ಓರ್ವ ಬಾಲಕನಿಗೆ ಗಾಯಗಳಾಗಿವೆ. ಮನೋರಮಾ ಮತ್ತು ಬಾಲಾಜಿ ಎಂಬುವವರಿಗೆ ಸೇರಿದ ಈ ಮನೆ ಸುಮಾರು 30 ವರ್ಷ ಹಳೆಯದಾಗಿದ್ದು ಬೇಸ್ಮೆಂಟ್ ಶಿಥಿಲಗೊಂಡಿರುವುದೇ ಮನೆ ಕುಸಿಯಲು ಕಾರಣವಾಗಿದೆ.
ತೆರವು ಕಾರ್ಯಾಚರಣೆಯಲ್ಲಿ ವಿಳಂಬ ಧೋರಣೆಯನ್ನು ಖಂಡಿಸಿರುವ ಸ್ಥಳೀಯರು ಸ್ಥಳಕ್ಕೆ ಮುಖ್ಯ ಇಂಜಿನಿಯರ್ ಕೃಷ್ಣ ಮೂರ್ತಿ ಆಗಮಿಸುತ್ತಿದ್ದಂತೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ತೆರವು ಕಾರ್ಯಾಚರಣೆ ವಿಳಂಬವಾದಷ್ಟೂ ಪಕ್ಕದ ಕಟ್ಟಡಗಳಿಗೆ ಹಾನಿಯುಂಟಾಗಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅಗ್ನಿಶಾಮಕ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.