Untitled Document
Sign Up | Login    
Dynamic website and Portals
  
November 1, 2014

ಯಕ್ಷಗಾನ ಕಲಾವಿದರು ಕನ್ನಡ ಉಳಿಸುವ ಯೋಧರು: ಡಾ. ಚಂದ್ರಶೇಖರ ದಾಮ್ಲೆ

ಮಹಾಭಾರತದ ಮಹಾಪಾತ್ರಗಳು ಪುಸ್ತಕ ಬಿಡುಗಡೆ ಸಮಾರಂಭ ಮಹಾಭಾರತದ ಮಹಾಪಾತ್ರಗಳು ಪುಸ್ತಕ ಬಿಡುಗಡೆ ಸಮಾರಂಭ

Sullia : 'ಯಕ್ಷಗಾನದ ಕಲಾವಿದರು', ಸುಲಲಿತ ಸರಳ ಕನ್ನಡದ ಉಳಿಕೆಯನ್ನು ಮಾಡುವ ಯೋಧರು. ಇವರಿಂದಲೇ ಶುದ್ಧ ಕನ್ನಡದ ಉಳಿಕೆ ಸಾಧ್ಯ. ಭಾರತೀಯ ಸಂಸ್ಕೃತಿ- ಪುರಾಣಗಳು ಜನರ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇದು ಪ್ರತಿಜ್ಞೆ-ಪ್ರತೀಕಾರಗಳ ಕಥೆ. ಮಹಾಭಾರತವು ಈಗಲೂ ಪ್ರಸ್ತುತವಾಗಿರುವ ಕಥೆಯಾಗಿದೆ, ಎಂದು ಡಾ. ಚಂದ್ರಶೇಖರ ದಾಮ್ಲೆ ಹೇಳಿದ್ದಾರೆ.

ಅ.31ರಂದು ಸುಳ್ಯಸ್ನೇಹ ಶಿಕ್ಷಣ ಸಂಸ್ಥೆಯ ಸ್ನೇಹಸದನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಕಲಿತ ಮಹಾಭಾರತದ ಮಹಾಪಾತ್ರಗಳು ಕೃತಿ ಬಿಡುಗಡೆಯಲ್ಲಿ ಭಾಗವಹಿಸಿ ಚಂದ್ರಶೇಖರ ದಾಮ್ಲೆ ಮಾತನಾಡಿದರು.

ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯು 2013ನೇ ಅಕ್ಟೋಬರ್ 17 ರಿಂದ 27ರ ವರೆಗೆ ನಡೆಸಿದ ಯಕ್ಷಗಾನ ಪ್ರದರ್ಶನಗಳ ಸಂದರ್ಭದಲ್ಲಿ ನಡೆಸಿದ ಉಪನ್ಯಾಸಗಳ ಬರಹ ರೂಪ ಇದಾಗಿದೆ.

ಸುಳ್ಯದ ಶಾಸಕ ಎಸ್ ಅಂಗಾರರವರು ಪುಸ್ತಕವನ್ನು ಲೋಕಾರ್ಪಣೆಗೈದರು. ಸಮಾರಂಭದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಭಕ್ತವತ್ಸಲ ನೀರಬಿದಿರೆ ಎಲ್ಲರನ್ನೂ ಸ್ವಾಗತಿಸಿ, ಖಜಾಂಜಿ ಜಗನ್ಮೋಹನ ರೈ ಮರ್ಕಂಜ ವಂದನಾರ್ಪಣೆ ಗೈದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ಪುಸ್ತಕ ರಚನೆಯ ಹಿಂದಿನ ಶ್ರಮವನ್ನು ಮೆಲುಕು ಹಾಕಿದರು. ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Event

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ:  ಸ್ವಚ್ಚತಾ ಅಭಿಯಾನ
  • ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ: ಸ್ವಚ್ಚತಾ ಅಭಿಯಾನ
  • 'ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ' ಎಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವಾ ಸಂಘಟನೆಯಾದ 'ರಾಘವ ಸೇನೆ'ಯ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು.
  • ಯೋಧರಿಗೆ ರಾಖಿಕಟ್ಟಿ ರಕ್ಷಾ ಬಂಧನ ಆಚರಿಸಿದ ಸಚಿವೆ ಸ್ಮೃತಿ ಇರಾನಿ
  • 70ನೇ ಸ್ವಾತಂತ್ರ್ಯದಿನಾಚರಣೆ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited