ಶ್ರೀನಗರ : ಜಮ್ಮು-ಕಾಶ್ಮೀರದ ಕುಪ್ವಾರ ಬಳಿಯ ಮಾಛಿಲ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸೇನಾಧಿಕಾರಿಗಳು ಹಾಗೂ ನಾಲ್ವರು ಯೋಧರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
2010ರ ಏಪ್ರಿಲ್ ನಲ್ಲಿ ಜಮ್ಮು-ಕಾಶ್ಮೀರದ ಉತ್ತರ-ಕಾಶ್ಮೀರದಲ್ಲಿನ ಬಳಿಯ ಮಾಛಿಲ್ ನಲ್ಲಿ ಮೂವರು ಯುವಕರನ್ನು ಭಾರತೀಯ ಸೇನೆ ಎನ್ ಕೌಂಟರ್ ನಡೆಸಿತ್ತು.
ಪಾಕ್ ನುಸುಳುಕೋರರು ಎಂದು ಭಾವಿಸಿ ಸೇನಾಧಿಕಾರಿಗಳು ಈ ಎನ್ ಕೌಂಟರ್ ನಡೆಸಿದ್ದರು. ಈ ಪ್ರಕರಣದ ಬಗ್ಗೆ ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿತ್ತು. ತನಿಖೆ ಬಳಿಕ ಇದು ನಕಲಿ ಎನ್ ಕೌಂಟರ್ ಎಂಬುದು ಸಾಬೀತಾಗಿತ್ತು.
ಇಬ್ಬರು ಸೇನಾಧಿಕಾರಿಗಳು ಹಾಗೂ ಐವರು ಯೋಧರು ಸೇರಿ ಒಟ್ಟು 7 ಯೋಧರ ವಿರುದ್ಧ ಜಮ್ಮು-ಕಾಶ್ಮೀರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಜನರಲ್ ಕೋರ್ಟ್ ಮಾರ್ಷಲ್, ಏಳು ಯೋಧರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ನೀಡಿದೆ.