ಹೈದ್ರಾಬಾದ್ : ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಯೋರ್ವ ಬೆಳ್ಳಂ ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.
ಹೈದ್ರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿರುವ ಕೆ.ಬಿ.ಪಾರ್ಕ್ ನಲ್ಲಿ ಅರಬಿಂದ ಫಾರ್ಮ್ ಕಂಪನಿ ಉಪಾಧ್ಯಕ್ಷ ನಿತ್ಯಾನಂದರೆಡ್ಡಿ ಎಂಬುವವರ ಮೇಲೆ ದುಷ್ಕರ್ಮಿ ಎಕೆ-47ನಿಂದ ಏಕಾ ಏಕಿ ಶೂಟೌಟ್ ನಡೆಸಿದ್ದಾನೆ. ತಕ್ಷಣ ನಿತ್ಯಾನಂದರೆಡ್ಡಿ ತಮ್ಮ ಬಳಿಯಿರುವ ಗನ್ ನಿಂದ ಪ್ರತಿ ದಾಳಿ ದುಷ್ಕರ್ಮಿ ಸ್ಥಳದಲ್ಲೇ ಎಕೆ-47 ಗನ್ ಬಿಟ್ಟು ಪರಾರಿಯಾಗಿದ್ದಾನೆ.
ಆದರೆ ಅದೃಷ್ಟವಶಾತ್ ಎಕೆ-47ನ್ನು ಸರಿಯಾಗಿ ಆಪರೇಟ್ ಆಗದ ಕಾರಣ ರೆಡ್ಡಿಯವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ರೆಡ್ಡಿ ಕೆ.ಬಿ.ಪಾರ್ಕ್ ಗೆ ವಾಯುವಿಹಾರಕ್ಕಾಗಿ ತೆರಳಿದ್ದರು. ಈ ವೇಳೆ ಈ ಘಟನೆ ಸಮ್ಭವಿಸಿದ್ದು, ವಾಯುವಿಹಾರಿಗಳು ಆತಂಕಕ್ಕೀಡಾಗಿದ್ದಾರೆ.
ಸ್ಥಳಕ್ಕೆ ಬಂಜಾರಾ ಹಿಲ್ಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಕೆ-47 ವಶಕ್ಕೆ ಪಡೆದಿದ್ದು, ದುಷ್ಕರ್ಮಿಗಾಗಿ ಶೋಧ ಆರಂಭಿಸಿದ್ದಾರೆ.