Untitled Document
Sign Up | Login    
Dynamic website and Portals
  
November 19, 2014

ಹೈದ್ರಾಬಾದ್ ನಲ್ಲಿ ದುಷ್ಕರ್ಮಿಯಿಂದ ಶೂಟೌಟ್

ಹೈದ್ರಾಬಾದ್ : ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಯೋರ್ವ ಬೆಳ್ಳಂ ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.

ಹೈದ್ರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿರುವ ಕೆ.ಬಿ.ಪಾರ್ಕ್ ನಲ್ಲಿ ಅರಬಿಂದ ಫಾರ್ಮ್ ಕಂಪನಿ ಉಪಾಧ್ಯಕ್ಷ ನಿತ್ಯಾನಂದರೆಡ್ಡಿ ಎಂಬುವವರ ಮೇಲೆ ದುಷ್ಕರ್ಮಿ ಎಕೆ-47ನಿಂದ ಏಕಾ ಏಕಿ ಶೂಟೌಟ್ ನಡೆಸಿದ್ದಾನೆ. ತಕ್ಷಣ ನಿತ್ಯಾನಂದರೆಡ್ಡಿ ತಮ್ಮ ಬಳಿಯಿರುವ ಗನ್ ನಿಂದ ಪ್ರತಿ ದಾಳಿ ದುಷ್ಕರ್ಮಿ ಸ್ಥಳದಲ್ಲೇ ಎಕೆ-47 ಗನ್ ಬಿಟ್ಟು ಪರಾರಿಯಾಗಿದ್ದಾನೆ.

ಆದರೆ ಅದೃಷ್ಟವಶಾತ್ ಎಕೆ-47ನ್ನು ಸರಿಯಾಗಿ ಆಪರೇಟ್ ಆಗದ ಕಾರಣ ರೆಡ್ಡಿಯವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ರೆಡ್ಡಿ ಕೆ.ಬಿ.ಪಾರ್ಕ್ ಗೆ ವಾಯುವಿಹಾರಕ್ಕಾಗಿ ತೆರಳಿದ್ದರು. ಈ ವೇಳೆ ಈ ಘಟನೆ ಸಮ್ಭವಿಸಿದ್ದು, ವಾಯುವಿಹಾರಿಗಳು ಆತಂಕಕ್ಕೀಡಾಗಿದ್ದಾರೆ.

ಸ್ಥಳಕ್ಕೆ ಬಂಜಾರಾ ಹಿಲ್ಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಕೆ-47 ವಶಕ್ಕೆ ಪಡೆದಿದ್ದು, ದುಷ್ಕರ್ಮಿಗಾಗಿ ಶೋಧ ಆರಂಭಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited