ಹಿಸಾರ್ : ಸ್ವಯಂ ಘೋಷಿತ ದೇವಮಾನವ ರಾಮ್ ಪಾಲ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗಾಗಿ ಅಜ್ನಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಮಧ್ಯಾಹ್ನ ಎರಡು ಗಂಟೆಗೆ ಪೊಲೀಸರು ರಾಮ್ ಪಾಲ್ ನನ್ನು ಪಂಜಾಬ್-ಹರ್ಯಾಣಾ ಹೈಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಬಂಧನದ ಬಳಿಕ ರಾಮ್ ಪಾಲ್ ನನ್ನು ಪಂಚಕುಲಾ ಆಸ್ಪತ್ರೆಗೆ ಕರೆದೊಯ್ದು, ತಪಾಸಣೆ ನಡೆಸಲಾಯಿತು.
ಆಸ್ಪತ್ರೆಯಿಂದ ಹೊರಬಂದ ಬಳಿಕ ಸಿದ್ದಿಗಾರರೊಂದಿಗೆ ಮಾತನಾಡಿದ ರಾಮ್ ಪಾಲ್, ತನ್ನ ವಿರುದ್ಧದ ಎಲ್ಲಾ ಆರೋಪಗಳೂ ಸುಳ್ಳು. ನಾನೊಬ್ಬ ಮುಗ್ದ, ಅಮಾಯಕ ಎಂದು ತಿಳಿಸಿದ್ದಾನೆ. ಬಳಿಕ ಪೊಲೀಸರು ರಾಮ್ ಪಾಲ್ ನನ್ನು ಅಜ್ನಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ಕಳೆದ ಒಂದು ವಾರದಿಂದ ರಾಮ್ ಪಾಲ್ ಬಂಧನಕ್ಕಾಗಿ ನಡೆಯುತ್ತಿದ್ದ ಹೈಡ್ರಾಮಾ ಮುಕ್ತಾಯವಾದಂತಾಗಿದೆ.
ಈ ನಡುವೆ 492 ಜನ ರಾಮ್ ಪಾಲ್ ಬೆಂಬಲಿಗರನು ಪೊಲೀಸರು ಬಂಧಿಸಿದ್ದು, ಅವರಲ್ಲಿ 71 ಜನರನ್ನು ಪೊಲೀಸರು ಹಿಸಾರ್ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.