Untitled Document
Sign Up | Login    
Dynamic website and Portals
  
November 25, 2014

ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ: ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ

Pranab Mukharji (File Pic) Pranab Mukharji (File Pic)

BW News Bureau : 'ರಾಷ್ಟ್ರಪತಿ' ಪ್ರಣಬ್ ಮುಖರ್ಜಿ ಅವರು ನ.25ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಲಹಂಕ ವಾಯುಪಡೆ ಕೇಂದ್ರದಿಂದ ಐ.ಐ.ಎಸ್.ಸಿ ವರೆಗೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಭಾರತೀಯ ವಿಜ್ಞಾನ ಕೇಂದ್ರದ ಜೆ. ಎನ್ ಟಾಟಾ ಆಡಿಯೋರಿಯಂನಲ್ಲಿ ನಡೆಯಲಿರುವ ಒಂದನೇ ಕಾಮನ್‌ ವೆಲ್ತ್ ಸೈನ್ಸ್‌ನ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಸಂಜೆ 4 ಗಂಟೆಗೆ ಯಲಹಂಕ ವಾಯುಪಡೆ ಕೇಂದ್ರದಿಂದ ಹೊರಡುವ ರಾಷ್ಟ್ರಪತಿಯವರ ಕಾರು ಬಳ್ಳಾರಿ ರಸ್ತೆಯಲ್ಲಿ ಬಿ.ಎಸ್.ಎಫ್ ತರಬೇತಿ ಕೇಂದ್ರ ಬಾಗಲೂರು ಕ್ರಾಸ್, ವೆಂಕಟಾಲ, ಕೋಗಿಲು ಕ್ರಾಸ್, ಹೆಬ್ಬಾಳ ಮೇಲು ಸೇತುವೆ, ಸಿಬಿಐ, ಸಂಜಯನಗರ ಕ್ರಾಸ್, ಮೇಖ್ರಿ ವೃತ್ತ ಅಪ್ ರ್ಯಾಂಪ್-ಸರ್.ಸಿ ರಾಮನ್ ರಸ್ತೆಯಿಂದ ಐ.ಐ.ಎಸ್.ಸಿ ತಲುಪಲಿದೆ.

ಈ ವೇಳೆ ಸಾರ್ವಜನಿಕರ ವಾಹನಗಳ ನಿಲುಗಡೆ ತಡೆಯುವುದು ಮತ್ತು ಮಾರ್ಗ ಬದಲಿಸುವುದು ಅನಿವಾರ್ಯ, ಆದ್ದರಿಂದ ತೊಂದರೆಯಿಂದ ಪಾರಾಗಲು ಸಾರ್ವಜನಿಕರು ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited