BW News Bureau : 'ರಾಷ್ಟ್ರಪತಿ' ಪ್ರಣಬ್ ಮುಖರ್ಜಿ ಅವರು ನ.25ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಲಹಂಕ ವಾಯುಪಡೆ ಕೇಂದ್ರದಿಂದ ಐ.ಐ.ಎಸ್.ಸಿ ವರೆಗೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಭಾರತೀಯ ವಿಜ್ಞಾನ ಕೇಂದ್ರದ ಜೆ. ಎನ್ ಟಾಟಾ ಆಡಿಯೋರಿಯಂನಲ್ಲಿ ನಡೆಯಲಿರುವ ಒಂದನೇ ಕಾಮನ್ ವೆಲ್ತ್ ಸೈನ್ಸ್ನ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಸಂಜೆ 4 ಗಂಟೆಗೆ ಯಲಹಂಕ ವಾಯುಪಡೆ ಕೇಂದ್ರದಿಂದ ಹೊರಡುವ ರಾಷ್ಟ್ರಪತಿಯವರ ಕಾರು ಬಳ್ಳಾರಿ ರಸ್ತೆಯಲ್ಲಿ ಬಿ.ಎಸ್.ಎಫ್ ತರಬೇತಿ ಕೇಂದ್ರ ಬಾಗಲೂರು ಕ್ರಾಸ್, ವೆಂಕಟಾಲ, ಕೋಗಿಲು ಕ್ರಾಸ್, ಹೆಬ್ಬಾಳ ಮೇಲು ಸೇತುವೆ, ಸಿಬಿಐ, ಸಂಜಯನಗರ ಕ್ರಾಸ್, ಮೇಖ್ರಿ ವೃತ್ತ ಅಪ್ ರ್ಯಾಂಪ್-ಸರ್.ಸಿ ರಾಮನ್ ರಸ್ತೆಯಿಂದ ಐ.ಐ.ಎಸ್.ಸಿ ತಲುಪಲಿದೆ.
ಈ ವೇಳೆ ಸಾರ್ವಜನಿಕರ ವಾಹನಗಳ ನಿಲುಗಡೆ ತಡೆಯುವುದು ಮತ್ತು ಮಾರ್ಗ ಬದಲಿಸುವುದು ಅನಿವಾರ್ಯ, ಆದ್ದರಿಂದ ತೊಂದರೆಯಿಂದ ಪಾರಾಗಲು ಸಾರ್ವಜನಿಕರು ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.