ನವದೆಹಲಿ : 'ರಾಧಾಕೃಷ್ಣನ್' ಅವರ ನಿವೃತ್ತಿಯಿಂದಾಗಿ ತೆರವುಗೊಂಡಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಕುಮಾರ್ ಸಿಲೀನ್ ಆಲೂರು ಅವರನ್ನು ನೇಮಕ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ನೂತನ ಅಧ್ಯಕ್ಷರ ನೇಮಕ ಮಾಡಿದೆ. ರಾಧಾಕೃಷ್ಣನ್ ನಿವೃತ್ತಿ ಬಳಿಕ ಶೈಲೇಶ್ ನಾಯಕ್ ಅವರನ್ನು ಇಸ್ರೋದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಕಿರಣ್ ಕುಮಾರ್ ಸಿಲೀನ್ ಆಲೂರು ಮೂಲತಃ ಹಾಸನದ ಆಲೂರಿನವರು ಬೆಂಗಳೂರಿನಲ್ಲಿ ಉನ್ನತ ವ್ಯಾಸಾಂಗ ಮಾಡಿದ್ದಾರೆ.
ಇಸ್ರೋ ಮಾಜಿ ಅಧ್ಯಕ್ಷ ರಾಧಾಕೃಷ್ಣನ್ ನೇತೃತ್ವದಲ್ಲಿ ನಡೆದ ಮಂಗಳಯಾನದ ಯಶಸ್ಸಿನಲ್ಲಿ ಕಿರಣ್ ಕುಮಾರ್ ದೊಡ್ಡ ಶ್ರಮ ವಹಿಸಿದ್ದರು. ಇಸ್ರೋದ ನೂತನ ಅಧ್ಯಕ್ಷರಾಗಿ ಕಿರಣ್ ಕುಮಾರ್ ಅವರು ನೇಮಕಗೊಂಡಿರುವುದು ಕರ್ನಾಟಕವೇ ಹೆಮ್ಮೆ ಪಡುವ ಸುದ್ದಿಯಾಗಿದೆ.