ನವದೆಹಲಿ : ಕರ್ನಾಟಕದ ಸಿ-ಕೆಟಗರಿಯ 51 ಗಣಿ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದು ಗುತ್ತಿಗೆ ನೀಡುವ ವಿಚಾರದಲ್ಲಿ ಕರ್ನಾಟಕ ಸರ್ಕಾರದ ನಿಲುವನ್ನು ಬೆಂಬಲಿಸಿದೆ.
ಜ.30ರಂದು ಸುಪ್ರೀಂ ಕೋರ್ಟ್ ನ ಅರಣ್ಯ ಪೀಠಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಿ-ಕೆಟಗರಿ ಗಣಿ ಗುತ್ತಿಗೆಯನ್ನು ಇ-ಹರಾಜಿನ ಮೂಲಕ ಗುತ್ತಿಗೆ ಹಂಚಿಕೆ ಮಾಡಬೇಕೆಂದು ಶಿಫಾರಸ್ಸು ಮಾಡಿದೆ.
ರಾಜ್ಯದ ಚಿತ್ರದುರ್ಗ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಿ-ಕೆಟಗರಿಯ 51 ಗಣಿಗಳಲ್ಲಿ ನಡೆಸುವ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇ-ಹರಾಜಿನ ಮೂಲಕ ಗುತ್ತಿಗೆಯನ್ನು ಮರು ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲು ಮುಂದಾಗಿತ್ತು. ಈ ಬಗ್ಗೆ ವರದಿ ನೀಡಿರುವ ಸಿಇಸಿ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸಿದ್ದು ಇ-ಹಾರಾಜು ಮೂಲಕ ಗಣಿ ಗುತ್ತಿಗೆಯನ್ನು ಮರುಹಂಚಿಕೆ ಮಾಡಬಹುದೆಂದು ಶಿಫಾರಸ್ಸು ಮಾಡಿದೆ.