ನವದೆಹಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನಿಗೂಢ ನಾಪತ್ತೆಯ ವಿಚಾರ ಇನ್ನು ಮುಂದುವರೆದಿದೆ. ಏಪ್ರಿಲ್ 13ರಂದು ರಾಹುಲ್ ಮರಳಲಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತಾದರೂ ಅದೀಗ ಏಪ್ರಿಲ್ 15ಕ್ಕೆ ಮುಂದೆ ಹೋಗಿದೆ.
ಏಪ್ರಿಲ್ 15ರಂದು ಅಥವಾ ಏ.19ರೊಳಗೆ ಯಾವುದೇ ದಿನ ರಾಹುಲ್ ಆಗಮಿಸಬಹುದು. ಏ.19ರಂದು ದೆಹಲಿಯಲ್ಲಿ ನಡೆಯಲಿರುವ ಭೂಸ್ವಾಧೀನ ವಿರೋಧಿ ರೈತರ ರ್ಯಾಲಿಯಲ್ಲಿ ಮಾತನಾಡುವರು ಎಂದು ಮೂಲಗಳು ಹೇಳಿವೆ.
ರ್ಯಾಲಿಯಲ್ಲಿ ರಾಹುಲ್ ಭಾಗವಹಿಸಲಿರುವ ಕಾರಣ ಭಾರಿ ಪೂರ್ವಸಿದ್ಧತೆಗಳು ನಡೆದಿವೆ ಎಂದು ತಿಳಿದುಬಂದಿದೆ.