ನವದೆಹಲಿ : 'ಸಂಸತ್ ಅಧಿವೇಶನ'ದ ಪ್ರಶ್ನೋತ್ತರ ಕಲಾಪವನ್ನು ರದ್ದುಗೊಳಿಸಿ ನೆಟ್ ನ್ಯೂಟ್ರಲಿಟಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ನೆಟ್ ನ್ಯೂಟ್ರಲಿಟಿ ಬಗ್ಗೆ ಇಂದಿನ ಸಂಸತ್ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇನೆ, ಇದಕ್ಕಾಗಿ ಪ್ರಶ್ನೋತ್ತರ ಕಲಾಪವನ್ನು ರದ್ದುಗೊಳಿಸಬೇಕು ಎಂದು ಮಾಧ್ಯಮದ ಮೂಲಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಏ.21ರ ಅಧಿವೇಶನದಲ್ಲಿ ನೆಟ್ ನ್ಯೂಟ್ರಲಿಟಿ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇತ್ತೀಚಿನ ದಿನಗಳಲ್ಲಿ ನೆಟ್ ನ್ಯೂಟ್ರಲಿಟಿ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದೆ. ಸಮಾನ ರೀತಿಯಲ್ಲಿ ಎಲ್ಲಾ ವಿಷಯ ಮತ್ತು ಅಪ್ಲಿಕೇಶನ್ ಗಳ ಪ್ರವೇಶವನ್ನು ಗ್ರಾಹಕರಿಗೆ ಇಂಟರ್ನೆಟ್ ಒದಗಿಸುವವರು ನೀಡಬೇಕು ಎಂಬುದು ಇದರ ಹಿಂದಿರುವ ತತ್ವ.
ಟೆಲಿಕಾಮ್ ರೆಗ್ಯುಲೇಟರ್ ಗಳು ಇಂಟರ್ನೆಟ್ ಸೌಲಭ್ಯವನ್ನು ಪಡೆಯುವ ಗ್ರಾಹಕರ ಮೇಲೆ ಕೆಲವೊಂದು ಕಟ್ಟುಪಾಡುಗಳನ್ನು ಹೇರುತ್ತಿರುವುದು ನೆಟ್ ನ್ಯೂಟ್ರಲಿಟಿಯ ವಿಷಯದ ಚರ್ಚೆಯ ಉಗಮಕ್ಕೆ ಕಾರಣವಾಗಿದೆ.