ಎಟಾ : ನೇಪಾಳದಲ್ಲಿ ಭೂಕಂಪ ಸಂಭವಿಸಲು ಗೋಮಾಂಸ ತಿನ್ನುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇದಾರನಾಥ ದೇಗುಲಕ್ಕೆ ಹೋಗಿದ್ದೇ ಕಾರಣ ಎಂದು ಕೆಲ ದಿನಗಳ ಹಿಂದಷ್ಟೇ ಬೇಜವಾಬ್ದಾರಿಯಾಗಿ ಮಾತನಾಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಇದೀಗ ರಾಹುಲ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೃಷ್ಣ ಪರಮಾತ್ಮನಿಗೆ ಹೋಲಿಕೆ ಮಾಡಿದ್ದಾರೆ.
ರಾಹುಲ್ ಗಾಂಧಿಗೆ ರಾಜಕಾರಣದ ಎ, ಬಿ, ಸಿ, ಡಿ, ಗೊತ್ತಿಲ್ಲ. ಮೆಕ್ಕೆಜೋಳ ಹಾಗೂ ಗೋಧಿ ಬಗ್ಗೆ ವ್ಯತ್ಯಾಸ ತಿಳಿಯದ ಈ ವ್ಯಕ್ತಿ ರೈತರ ಬಗ್ಗೆ ಮಾತನಾಡುತ್ತಿದ್ದಾನೆ. ಕಾಂಗ್ರೆಸ್ ಉಪಾಧ್ಯಕ್ಷನಿಗೆ ತಲೆ ಕೆಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಮೋದಿ ಅವರನ್ನು ಹಾಡಿ ಹೊಗಳಿರುವ ಸಾಕ್ಷಿ, ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಭರವಸೆಯನ್ನು ಮೋದಿ ಅವರು ಈಡೇರಿಸಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಭರವಸೆ ಈಡೇರಿಸುವ ಕಾರ್ಯ ಪ್ರಗತಿಯಲ್ಲಿದೆ. ನರೇಂದ್ರ ಮೋದಿ ಅವರು ಕೃಷ್ಣ ಇದ್ದಂತೆ. ಶ್ರೀಕೃಷ್ಣ ದ್ರೌಪದಿಯನ್ನು ವಸ್ತ್ರಾಪಹರಣದಿಂದ ಪಾರು ಮಾಡಿದಂತೆ ಮೋದಿ ಅವರು ಸಕಾಲಕ್ಕೆ ನೇಪಾಳದ ರಕ್ಷಣೆಗೆ ಧಾವಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.