ಲಖ್ನೌ : ಬಹುಜನ ಸಮಾಜ ಪಕ್ಷ(ಎಸ್.ಪಿ&id=18178'>ಬಿ.ಎಸ್.ಪಿ) ಮುಖಂಡ ಹಾಗೂ ಸ್ಥಾಪಕ ಸದಸ್ಯ ದೀನನಾಥ್ ಭಾಸ್ಕರ್ ತಮ್ಮ ಮಾತೃ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಮೇ.4ರಂದು ಈ ಬಗ್ಗೆ ಹೇಳಿಕೆ ನೀಡಿರುವ ದೀನನಾಥ್ ಭಾಸ್ಕರ್, ತಾವು ಬಿಜೆಪಿ ಸದಸ್ಯತ್ವ ಪಡೆದಿದ್ದು, ಮೇ.14ರಂದು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ದೀನನಾಥ್ ಭಾಸ್ಕರ್ ತಿಳಿಸಿದ್ದಾರೆ.
ಎಸ್.ಪಿ&id=18178'>ಬಿ.ಎಸ್.ಪಿ ತೊರೆಯುವುದರ ಬಗ್ಗೆ ಬೆಂಬಲಿಗರೊಂದಿಗೆ ಸಭೆ ನಡೆಸಿ ಸಾಕಷ್ಟು ಯೋಚನೆ ಮಾಡಿರುವುದಾಗಿ ಹೇಳಿರುವ ದೀನನಾಥ್ ಭಾಸ್ಕರ್, ಬಿಜೆಪಿ ಟಿಕೆಟ್ ದೊರೆತರೆ 2017ನೇ ಸಾಲಿನಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
1993ರಲ್ಲಿ ಅಸ್ಥಿತ್ವದಲ್ಲಿದ್ದ ಎಸ್.ಪಿ-ಎಸ್.ಪಿ&id=18178'>ಬಿ.ಎಸ್.ಪಿ ಸಮ್ಮಿಶ್ರ ಸರ್ಕಾರದಲ್ಲಿ ದೀನನಾಥ್ ಭಾಸ್ಕರ್ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1996ರಲ್ಲಿ ಎಸ್.ಪಿ&id=18178'>ಬಿ.ಎಸ್.ಪಿ ತೊರೆದು ಎಸ್.ಪಿ ಸೇರಿದ್ದ ದೀನನಾಥ್ ಭಾಸ್ಕರ್ 2009ರಲ್ಲಿ ಪುನಃ ಎಸ್.ಪಿ&id=18178'>ಬಿ.ಎಸ್.ಪಿಗೆ ಮರಳಿದ್ದರು. ಈಗ ಬಿಜೆಪಿ ಸೇರುವ ತಯಾರಿ ನಡೆಸಿದ್ದಾರೆ.