Untitled Document
Sign Up | Login    
Dynamic website and Portals
  
May 25, 2015

ತಮಿಳುನಾಡು ಜನತೆಗೆ ಜಯಲಲಿತಾರಿಂದ ಭರ್ಜರಿ ಯೋಜನೆಗಳ ಘೋಷಣೆ

ಜಯಲಲಿತಾ ಜಯಲಲಿತಾ

ಚೆನ್ನೈ : ಶನಿವಾರವಷ್ಟೇ 5ನೇ ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಜೆ.ಜಯಲಲಿತಾ, ರಾಜ್ಯದ ಮತದಾರರಿಗೆ ಭರ್ಜರಿ ಯೋಜನೆ ಘೋಷಿಸಿದ್ದಾರೆ.

ಘೋಷಣೆ ಹಿಂದೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಚಿತ್ತ ಇದೆ ಎಂದು ವಿಶ್ಲೇಷಿಸಲಾಗಿದೆ. ಕಚೇರಿಗೆ ಆಗಮಿಸಿ ಅಧಿಕೃತ ಕೆಲಸಗಳಿಗೆ ಚಾಲನೆ ನೀಡಿದ ಜಯಲಲಿತಾ, 1800 ಕೋಟಿ ರೂ. ಮೊತ್ತದ ಹಲವು ಯೋಜನೆಗಳನ್ನು ಘೋಷಿಸಿದರು.

* ರಾಜ್ಯದ ವಿವಿಧ ಭಾಗಗಳಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸುವ 201 ಹೊಸ ಅಮ್ಮಾ ಕ್ಯಾಂಟೀನ್‌ ಗಳನ್ನು ಆರಂಭಿಸಲಾಗುವುದು.

* ಬಡ ಜನರು ಆರ್‌ ಸಿಸಿ ಮನೆ ಹೊಂದಲು ಅನುವಾಗುವಂತೆ, ಪ್ರತಿ ಕುಟುಂಬಕ್ಕೆ 2.10 ಲಕ್ಷ ರೂ. ನೆರವು.

* ತೊಗರಿಬೇಳೆ ಮತ್ತು ಉದ್ದಿನಬೇಳೆ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಪ್ರತಿ ಕುಟುಂಬಕ್ಕೆ ಮಾಸಿಕ 500 ಗ್ರಾಂನಂತೆ 53.50 ಮತ್ತು 56 ರೂ. ನಲ್ಲಿ ವಿತರಣೆ.

* ನಗರ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ನಗರಾಡಳಿತ ಸಂಸ್ಥೆಗಳಿಗೆ 1000 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

* ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸೌಕರ್ಯ ಅಭಿವೃದ್ಧಿಗಾಗಿ 800 ಕೋಟಿ ರೂ. ಮೊತ್ತದ ಯೋಜನೆ ಜಾರಿ

* ಅಮ್ಮಾ ಕ್ಯಾಂಟೀನ್‌, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಸ್ವಚ್ಛ ಕುಡಿಯುವ ನೀರು ಒದಗಿಸುವ ಯಂತ್ರಗಳ ಸ್ಥಾಪನೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited