ಮುಂಬೈ : ಮುಂಬೈ ಸರಣಿ ಬಾಂಬ್ ಸ್ಪೋಟದ ಹಿನ್ನಲೆಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಯಾಕೂಬ್ ಮೆಮೊನ್ ಪರ ಶನಿವಾರ ರಾತ್ರೆ ಟ್ವೀಟ್ ಮಾಡಿದ್ದ ನಟ ಸಲ್ಮಾನ್ ಖಾನ್, ದೇಶ್ಯಾದಂತ ವ್ಯಾಪಕ ಟೀಕೆ ವ್ಯಕ್ತವಾದುದ್ದರಿಂದ ಭಾನುವಾರ ಸಂಜೆ ಕ್ಷಮೆಯಾಚಿಸಿ ಟ್ವೀಟ್ ವಾಪಸ್ ಪಡೆದಿದ್ದಾರೆ.
ಶನಿವಾರ ರಾತ್ರಿ ಸಲ್ಮಾನ್ ಖಾನ್, ಯಾಕುಬ್ ಮೆಮೊನ ನನ್ನು ಗಲ್ಲಿಗೇರಿಸಬಾರದು. ಅದರ ಬದಲು ತಲೆಮರೆಸಿಕೊಂಡಿರುವ ಮುಂಬೈ ಸರಣಿ ಬಾಂಬ್ ಸ್ಪೋಟದ ಮುಖ್ಯ ಆರೋಪಿ, ಯಾಕುಬ್ ನ ಸಹೋದರ ಟೈಗರ್ ಮೆಮೊನ ಅನ್ನು ಗಲ್ಲಿಗೇರಿಸಬೇಕೆಂದು ಟ್ವೀಟ್ ಮಾಡಿದ್ದರು.
ಆದರೆ ಇದಕ್ಕೆ ದೇಶ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮುಂಬೈ ಬಿಜೆಪಿ ಕಾರ್ಯಕರ್ತರು ಸಲ್ಮಾನ್ ಖಾನ್ ಮನೆಯ ಎದುರು ಧರಣಿ ನಡೆಸಿದರು.
ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ರಾಜ್ಯಪಾಲರನ್ನು ಭೇಟಿ ಮಾಡಿ ಹಲವುಕೇಸ್ ಗಳಲ್ಲಿ ಆರೋಪಿಯಾಗಿರುವ ಸಲ್ಮಾನ್ ಖಾನ್ ಜಾಮೀನ್ ಅನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದರು.
ಬಿಜೆಪಿ ಮುಖಂಡ ಕೀರ್ತಿ ಸೋಮೈಯಾ, ಈ ವಿಷಯವನ್ನು ಲೋಕಸಭೆಯಲ್ಲಿ ಚರ್ಚಿಸಬೇಕು. ಸಲ್ಮಾನ್ ಖಾನ್ ದೇಶದ ಜನತೆಯ ಕ್ಷಮೆಯಾಚಿಸಬೇಉ ಎಂದು ಟ್ವೀಟ್ ಮಾಡಿದ್ದರು.
ಈ ವಿಷಯವಾಗಿ ಯೋಗ ಗುರು ಬಾಬಾ ರಾಮದೇವ್, ದೇಶ ವಿರೋಧಿಗಳಿಗೆ ಶಿಕ್ಷೆಯಾಗಬೇಕು, ದೇಶ ವಿರೋಧಿಗಳಿಗೆ ಇದೊಂದು ಪಾಠವಾಗಬೇಕೆಂದು ಹೇಳಿದ್ದರು.
ಯಾಕೂಬ್ ಪರ ಸಲ್ಮಾನ್ ಖಾನ್ ಟ್ವೀಟ್ ಮಾಡಿರುವುದಕ್ಕೆ ತಂದೆ ಸಲೀಂ ಖಾನ್ ಅವರೂ ವಿರೋಧ ವ್ಯಕ್ತ ಪಡಿಸಿದ್ದು, ಸರಿಯಾದ ಮಾಹಿತಿ ಇಲ್ಲದೇ ಈ ರೀತಿಯ ವಿಷಯವನ್ನು ಪ್ರಸ್ತಾಪಿಸಬಾರದು. ಸಲ್ಮಾನ್ ಖಾನ್ ಗೆ ಈ ವಿಷಯವಾಗಿ ತಪ್ಪು ತಿಳುವಳಿಕೆಯಾಗಿದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದ್ದರು.
ಈ ಎಲ್ಲಾ ಬೆಳವಣಿಗೆಯ ನಂತರ ಭಾನುವಾರ ಸಂಜೆ ಸಲ್ಮಾನ್ ಖಾನ್ ಕ್ಷಮೆಯಾಚಿಸಿ ಟ್ವೀಟ್ ಹಿಂದಕ್ಕೆ ಪಡೆದಿದ್ದಾರೆ.