Yeshwanthpur : ಮೇಯರ್ ಮಂಜುನಾಥ ರೆಡ್ಡಿ ಮಂಗಳವಾರ ಬಿಬಿಎಂಪಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ನೂರಾರು ಚುನಾವಣಾ ಗುರುತಿನ ಚೀಟಿ ವಿತರಣೆಯಾಗದೆ ಬಿಬಿಎಂಪಿ ಕಚೇರಿಯಲ್ಲಿ ಬಿದ್ದಿರುವುದನ್ನು ಗಮನಿಸಿದರು.
ಇದನ್ನು ನೋಡಿ ಗಾಬರಿಯಾದ ಮೇಯರ್ ಅದನ್ನು ತಕ್ಷಣ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೇಯರ್ ಮಂಜುನಾಥ ರೆಡ್ಡಿ ಕೆಂಪಾಪುರಕ್ಕೆ ಹೋಗುವ ಮಾರ್ಗ ಮಧ್ಯೆ ಯಶವಂತಪುರ ವಿಧಾನಸಭಾ ಕೇತ್ರದ ಹೇರೋಹೞಿಯ ಬಿಬಿಎಂಪ್ ಕಚೇರಿಗೆ ಭೇಟಿ ನೀಡಿದ್ದರು.
ನಾನು ಕಚೇರಿಗೆ ಹೋದಾಗ ನೂರಾರು ಗುರುತಿನ ಚೀಟಿಗಳು ಅಲ್ಲಿ ಬಿದ್ದಿರುವುದನ್ನು ನೋಡಿದೆ. ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ಆದಷ್ಟು ಬೇಗ ಅದನ್ನು ಜನರಿಗೆ ತಲುಪಿಸುವಂತೆ ಹೇಳಿದ್ದೇನೆ ಎಮ್ದು ಮೇಯರ್ ಮಂಜುನಾಥ ರೆಡ್ಡಿ ಹೇಳಿದ್ದಾರೆ.
ಇದು ಎರಡೂ ಕಡೆಯಿಂದ ಆದ ತಪ್ಪು. ಕೆಲವರು ಗುರುತಿನ ಚೀಟಿ ಪಡೆಯದೆ ಇದ್ದಾರೆ, ಆದರೆ ಅದರ ಮೇಲೆ ಅವರ್ ವಿಳಾಸ ಮತ್ತು ಫೋನ್ ನಂಬರ್ ಇದೆ ಅದನ್ನು ನೋದಿ ಅಧಿಕಾರಿಗಳು ಅವರನ್ನು ಸಂಪರ್ಕಿಸಬಹುದಾಗಿತ್ತು ಎಂದೂ ಅವರು ಹೇಳಿದರು.