ನವದೆಹಲಿ : ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಚಿತ್ರ ಪಿಕೆ ಪ್ರಚಾರಕ್ಕೆ ಪಾಕಿಸ್ತಾನದ ಐ ಎಸ್ ಐ ಜೊತೆ ಸೇರಿಕೊಂಡಿದ್ದರು ಎಂದು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.
ಅಮೀರ್ ಖಾನ್ ಭಾರತದ ಘನತೆ ಬಗ್ಗೆ ತನ್ನ ಪತ್ನಿಗೆ ಬೋಧಿಸಬೇಕೆಂಬ ರಾಮ್ ಮಾಧವ್ ಹೇಳಿಕೆಗೆ ಸುಬ್ರಮಣ್ಯ ಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಾನು ಅಮೀರ್ ಖಾನ್ ಹೇಳಿಕೆಗೆ ಪ್ರಾಮುಖ್ಯತೆ ಕೊಡುವುದಿಲ್ಲ. ಅದರೆ ಅವರು ಪಿಕೆ ಚಿತ್ರದ ಪ್ರಚಾರಕ್ಕಾಗಿ ಐ ಎಸ್ ಐ ಜೊತೆ ಸೇರಿದ್ದರು ಎಂದು ನನಗೆ ತಿಳಿದಿದೆ. ಅವರು ಇದರ ಕುರಿತು ಇನ್ನೂ ಸ್ಪಷ್ಟೀಕರಣ ನೀಡಿಲ್ಲ ಎಂದು ಸುಬ್ರಮಣ್ಯ ಸ್ವಾಮಿ ಎ ಎನ್ ಐ ಗೆ ಹೇಳಿದ್ದಾರೆ.
ಇನ್ಕ್ರೆಡಿಬಲ್ ಇಂಡಿಯಾದ ರಾಯಭಾರಿಯಾಗಿ ಅವರು ತಮ್ಮ ಪತ್ನಿ ಈ ದೇಶ ಅಸುರಕ್ಷಿತ ಎಂದು ಭಾಸವಾಗುತ್ತಿದೆ ಎಂದು ಹೇಳಿದ್ದಾರೆ ಎನ್ನುವುದು ಸರಿಯಲ್ಲ. ಅವರಿಗೆ ಅಸುರಕ್ಷಿತವೆಂದೆನಿಸಿದರೆ ದೇಶ ಬಿಟ್ಟು ಹೋಗಬಹುದು ಎಂದು ಹೇಳಿದ್ದಾರೆ.
ಈಗ ಅಮೀರ್ ಖಾನ್ ಇನ್ಕ್ರೆಡಿಬಲ್ ಇಂಡಿಯಾದ ರಾಯಭಾರಿಯಾಗಿ ಉಳಿದಿಲ್ಲ.
ಅಮೀರಖಾನ್ ಆಟೋ ಚಾಲಕರಿಗೆ ಮಾತ್ರ ಭಾರತದ ಘನತೆಯ ಬಗ್ಗೆ ಭೋಧಿಸುವುದಲ್ಲ, ತಮ್ಮ ಪತ್ನಿಗೂ ಈ ಕುರಿತು ಭೋಧಿಸಬೇಕೆಂಬ ಮಾಧವ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಅಮೀರ್ ಖಾನ್ ನ ಅಸಹಿಷ್ಣುತೆ ಕುರಿತ ಹೇಳಿಗೆ ಭಾರೀ ಚರ್ಚೆಗೆ ಕಾರಣವಾಗಿತ್ತಲ್ಲದೆ ಅನೇಕ ನಾಯಕರ ಕ್ರೋಧಕ್ಕೂ ಕಾರಣವಾಗಿದೆ.