ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಬುಧವಾರ ಬೆಳಗ್ಗೆ ಶ್ರೀಹರಿಕೋಟಾದಿಂದ ಭಾರತದ ಐದನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಸಿ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದರಿಂದ ದೇಶಿಯ ಜಿಪಿಎಸ್ ವ್ಯವಸ್ಥೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.
ಈಗಾಗಲೇ ೪ ನೌಕಾಯಾನ ಉಪಗ್ರಹವನ್ನು ಉಡಾವಣೆ ಮಾಡಲಾಗಿದ್ದು, ಕಾರ್ಯ ನಿರ್ವಹಿಸುತ್ತಿವೆ. ಐ ಆರ್ ಎನ್ ಎಸ್ ಎಸ್-1 ಸಿ ವ್ಯವಸ್ಥೆಗೆ ೪ ಉಪಗ್ರಹಗಳು ಸಾಕು. ಹೆಚ್ಚು ಉಪಗ್ರಗಳನ್ನು ಸೇರಿಸುವುದರಿಂದ ನಿಖರತೆ ಮತ್ತು ಪರಿಣಾಮಕಾರಿಯಾಗಲಿದೆ ಎಂದು ವಿಜ್ನಾನಿಗಳು ತಿಳಿಸಿದ್ದಾರೆ.
ಇನ್ನು ಕೆಲವೇ ತಿಂಗಳಲ್ಲಿ ಇನ್ನೂ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು. ಒಂದು ಸಲ ಈ ಸರನೀ ಉಪಗ್ರಹಗಳು ಉಡಾವಣೆ ಆದರೆ, ಭಾರತದ ಜಿಪಿಎಸ್ ವ್ಯವಸ್ಥೆ ಅಮೇರಿಕಾದ ವ್ಯವಸ್ಥೆಯ ಸಮಮಟ್ಟಕ್ಕೆ ತಲುಪುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಇಸ್ರೋ ವಿಜ್ನಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.