Untitled Document
Sign Up | Login    
Dynamic website and Portals
  
May 13, 2016

ಇಂದು 53 ರಾಜ್ಯಸಭಾ ಸದಸ್ಯರ ನಿವೃತ್ತಿ

ನವದೆಹಲಿ : ಸಂಸತ್ತಿನ ಮೇಲ್ನ್ಮನೆಯ 53 ಸದಸ್ಯರು ಶುಕ್ರವಾರ ನಿವೃತ್ತಿ ಹೊಂದಲಿದ್ದಾರೆ. ಇಂದು ನಿವೃತ್ತಿ ಹೊಂದಲಿರುವ 53 ಸದಸ್ಯರಲ್ಲಿ ವಿರೋಧ ಪಕ್ಷ ಕಾಂಗ್ರೆಸ್ಸದಸ್ಯರು 16. ಕಾಂಗ್ರೆಸ್ ಮೇಲ್ಮನೆಯಲ್ಲಿ ಒಟ್ಟು 53 ಸದಸ್ಯರನ್ನು ಹೊಂದಿದೆ.

ಆಡಳಿತ ಪಕ್ಷವಾದ ಬಿಜೆಪಿಯ ಐವರು ಮಂತ್ರಿಗಳಾದ, ವೆಂಕಯ್ಯನಾಯ್ಡು, ಪಿಯೂಷ್ ಗೋಯಲ್, ನಿರ್ಮಲಾ ಸಿತಾರಾಮನ್, ಮುಕ್ತಾರ್ ಅಬ್ಬಾಸ್ ನಕ್ವಿ ಮತ್ತು ವೈ ಎಸ್ ಚೌಧರಿ ಅವರೂ ಸಹ ಇಂದು ನಿವೃತ್ತಿ ಹೊಂದಲಿದ್ದಾರೆ. ಆದರೆ ಇವರೆಲ್ಲರೂ ಪುನಃ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಜಾಸ್ತಿ ಆದರೂ ಬಹುಮತ ಸಾಧ್ಯವಾಗುವುದಿಲ್ಲ.

ವಿಜಯ್ ಮಲ್ಯ ರಾಜಿನಾಮೆಯಿಂದ ತೆರವಾದ ಕರ್ನಾಟಕದ ರಾಜ್ಯಸಭಾ ಸ್ಥಾನದಿಂದ ವೆಂಕಯ್ಯನಾಯ್ಡು ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಬಿಜೆಪಿ ಆಂಧ್ರಪ್ರದೇಶದಲ್ಲಿ ಟಿಡಿಪಿಯ ಸಹಾಯ ಕೋರಿದರೆ, ವೆಂಕಯ್ಯನಾಯ್ಡು ಅವರನ್ನು ಆಂಧ್ರಪ್ರದೇಶದಿಂದ ಆಯ್ಕೆ ಮಾಡಬಹುದು. ನಾಯ್ಡು ಅವರು ಆಂಧ್ರದಿಂದ ಚುನಾಯಿತರಾದರೆ, ನಿರ್ಮಲಾ ಸೀತಾರಾಮನ್ ಅವರನ್ನು ಬೇರೆ ರಾಜ್ಯದಿಂದ ಚುನಾಯಿಸಬೇಕಾಗುತ್ತದೆ. ನಕ್ವಿ ಉತ್ತರಪ್ರದೇಶದಿಂದ, ಚೌಧರಿ ಆಂಧ್ರದಿಂದ ಮತ್ತು ಗೋಯೆಲ್ ಮಹಾರಾಷ್ಟ್ರದಿಂದ ಚುನಾಯಿತರಾಗುವ ಸಾಧ್ಯತೆ ಇದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited