ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ 'ಜೀವಜಲ ಉಚಿತ ವಿತರಣಾ' ಯೋಜನೆಯಡಿ ಗೋಕರ್ಣದ ಸುತ್ತಲಿನ ಗ್ರಾಮಗಳಿಗೆ ಉಚಿತವಾಗಿ ಶುದ್ಧವಾದ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಈ ಜನಪರ ಯೋಜನೆಯ ಬಗ್ಗೆ ತಿಪ್ಪಸಗಿ, ಕಟನಬಾವಿ ಗ್ರಾಮದ ಫಲಾನುಭವಿ ಜನರು ಕೃತಜ್ಞತೆ ವ್ಯಕ್ತಪಡಿಸಿ, ಈ ಯೋಜನೆ ಪ್ರಾರಂಭಿಸಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರನ್ನು ನೆನೆದು ಶೃದ್ಧಾ ಭಕ್ತಿಗಳಿಂದ ಫಲ ಸಮರ್ಪಿಸಿದರು. ಕುಡಿಯಲೂ ಸಹ ಹನಿ ನೀರಿಲ್ಲದ ಕಷ್ಟದ ಸಮಯದಲ್ಲಿ ಈ ಯೋಜನೆಯಿಂದ ಬಹಳ ಅನುಕೂಲವಾಯಿತು ಎಂದು ಸ್ಮರಿಸಿದರು.
ಕಳೆದ ಏಪ್ರಿಲ್ ತಿಂಗಳಿನಿಂದ ಪ್ರತಿದಿನವೂ ಕುಡಿಯುವ ನೀರು ಪೂರೈಸಲಾಗುತ್ತಿದೆ. ಶ್ರೀ ದೇವಾಲಯದ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ವೇ. ಶಿವರಾಮ ಮಯ್ಯರ್, ಶ್ರೀ ಮಂಗಲಮೂರ್ತಿ ಸಭಾಹಿತ – ವಕೀಲರು – ಗೋಕರ್ಣ ಇವರುಗಳು ಸಂಯೋಜಿಸಿರುತ್ತಾರೆ. ಆಡಳಿತಾಧಿಕಾರಿ ಶ್ರೀ ಹೆಗಡೆ, ತಿಪ್ಪಸಗಿ, ಕಟನಬಾವಿ ಗ್ರಾಮದ ಜನರು ಹಾಜರಿದ್ದರು.