Untitled Document
Sign Up | Login    
Dynamic website and Portals
  
June 29, 2016

ಓಡಿಶಾದ ಕರಾವಳಿಯಲ್ಲಿ ಏರ್ ಮಿಸೈಲ್ ಪರೀಕ್ಷೆ ನಡೆಸಲಿರುವ ಭಾರತ

ಬಾಲಸೋರ್ : ಭೂಮಿಯಿಂದ ಬಾನಿಗೆ ನೆಗೆಯುವ ಏರ್ ಮಿಸೈಲ್ (ಕ್ಷಿಪಣಿ) ಪರೀಕ್ಷೆಯನ್ನು ಬುಧವಾರ ಕೇಂದ್ರ ರಕ್ಷಣಾ ಇಲಾಖೆ ನೆಲೆ ಓಡಿಶಾದ ಕರಾವಳಿಯಲ್ಲಿ ನಡೆಸಲಿದೆ. ಹವಾಮಾನ ಅನುಕೂಲಕರವಾಗಿದ್ದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ಓಡಿಶಾದ ಚಂಡಿಪುರದಿಂದ ನಡೆಸಲು ಉದ್ದೇಶಿಸಲಾಗಿದೆ.

ಇಸ್ರೇಲ್​ನೊಂದಿಗೆ ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಇದಾಗಿದೆ ಎಂದು ಭಾರತದ ರಕ್ಷಣಾ ಇಲಾಖೆಯಾದ ಡಿಆರ್​ಡಿಓ ಮೂಲಗಳು ತಿಳಿಸಿವೆ. ಕ್ರಿಯಾತ್ಮಕ ಕಣ್ಗಾವಲು ಮತ್ತು ಬೆದರಿಕೆ ಭೀತಿಯನ್ನು ಗುರುತಿಸುವ ರಾಡಾರ್​ನ್ನು ಈ ಕ್ಷಿಪಣಿ ಹೊಂದಿದೆ.

ಪರೀಕ್ಷಾರ್ಥ ಪ್ರಯೋಗ ನಡೆಸಲಿರುವ ಬಾಲಸೋರ್ ಕರಾವಳಿಯ 2.5 ಕಿ. ಮೀ. ವ್ಯಾಪ್ತಿಯ ಆಸುಪಾಸಿನ ಗ್ರಾಮಸ್ಥರನ್ನು ಸುರಕ್ಷತೆ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವ್ಯಾಪ್ತಿಯಲ್ಲಿರುವ ಬಾಲಸೋರ್, ಭದ್ರಾಖ್, ಕೇಂದ್ರಪಾರಾ ಪ್ರದೇಶಗಳ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಬಾಲಸೋರ್ ಜಿಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited