Untitled Document
Sign Up | Login    
Dynamic website and Portals
  
August 10, 2016

ಆಂಗ್ಲತ್ವ ಭಾರತ ಬಿಟ್ಟು ತೊಲಗಲಿ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರ ಶ್ರೀ ಗೋಸಂದೇಶ

ಆಂಗ್ಲತ್ವ ಭಾರತ ಬಿಟ್ಟು ತೊಲಗಲಿ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರ ಶ್ರೀ ಗೋಸಂದೇಶ ಆಂಗ್ಲತ್ವ ಭಾರತ ಬಿಟ್ಟು ತೊಲಗಲಿ: ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರ ಶ್ರೀ ಗೋಸಂದೇಶ

ಬೆಂಗಳೂರು : ಬಾಗಿದವನು ಭಗವಂತನಾಗುವನು ಎಂಬುದು ಹನುಮಂತ ಕೊಟ್ಟ ಸಂದೇಶ. ಸೇವಕತ್ವದ ಆಳಕ್ಕೆ ಇಳಿದರೆ, ವ್ಯಕ್ತಿಯ ವ್ಯಕ್ತಿತ್ವ ಆಗಸದೆತ್ತರಕ್ಕೆ ಏರುತ್ತದೆ ಎಂಬುದನ್ನು ಹನುಮಂತ ಮಾಡಿ ತೋರಿಸಿದ್ದಾನೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.

ಬೆಂಗಳೂರಿನ ಗಿರಿನಗರದ ಶ್ರೀ ರಾಮಚಂದ್ರಾಪುರ ಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯಗೋಸಂದೇಶಸಭೆಯಲ್ಲಿ ಮಾತನಾಡಿ, ಮನುಷ್ಯಸಂತತಿ ಇಲ್ಲವಾದರೆ ಇಡೀ ಸೃಷ್ಟಿಯೇ ಸಂತಸಪಡಬಹುದು. ಯಾಕೆಂದರೆ ಮನುಷ್ಯ ಇಡೀ ಸೃಷ್ಟಿಗೆ ಕಂಟಕ ಪ್ರಾಯನಾಗಿದ್ದಾನೆ. ಆದರೆ ಗೋವಿಲ್ಲದಿದ್ದರೆ ಇಡೀ ಸೃಷ್ಟಿಯೇ ಸಂಕಟಪಡಬಹುದು. ಗೋವು ಇಲ್ಲವಾದರೆ ಪ್ರಪಂಚವೇ ಇಲ್ಲ ಎಂದು ನುಡಿದರು.

ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭವಾದ ದಿನ ಇಂದು. ಬಿಳಿಯರು ತೊಲಗಿದರು, ಆದರೆ ನಮ್ಮಲ್ಲಿನ ಬಿಳಿ(ಪಾಶ್ಚಾತ್ಯ ಮನೋಭಾವನೆ) ಇನ್ನೂ ಹಾಗೆಯೇ ಇದೆ. ಹಾಗಾಗಿ ನಾವು ಇಂದು ನಮ್ಮಲ್ಲಿನ ಬಿಳಿ (ಆಂಗ್ಲತ್ವ) ಭಾರತ ಬಿಟ್ಟು ತೊಲಗಲಿ ಎಂದು ಸಂಕಲ್ಪ ಮಾಡೋಣ ಎಂದರು.

ರಾಯಚೂರು ಮಾನ್ವಿಯ ಮುಕ್ತಾಗುಚ್ಛ ಬೃಹನ್ಮಠ ಕಲ್ಮಠದ ಪರಮಪೂಜ್ಯ ಷ. ಬ್ರ. ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಮ್ಮ ತಾಯಿಯನ್ನು ರಕ್ಷಿಸುವ ಪರಿಸ್ಥಿತಿಗೆ ಯಾಕೆ ಬಂದಿದ್ದೇವೆ ಎಂದರೆ ಅದಕ್ಕೆ ಸಂಸ್ಕಾರದ ಕೊರತೆಯೇ ಕಾರಣ. ಕಲ್ಲಿಗೆ ಸಂಸ್ಕಾರ ಕೊಟ್ಟರೆ ದೇವರ ಮೂರ್ತಿ ಆಗುತ್ತದೆ, ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆ ಆಗುತ್ತದೆ, ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಸಂಸ್ಕಾರ ಕೊಟ್ಟರೆ ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದ ಅವರು, ಬದುಕು ತುಂಬಾ ಚಿಕ್ಕದು, ಕೆಡುಕು ಮಾಡುವವರ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಕೆಡುಕಿಗಿಂತ ಹತ್ತು ಪಟ್ಟು ಹೆಚ್ಚು ಒಳಿತು ಮಾಡಬೇಕು. ರಾಘವೇಶ್ವರಶ್ರೀಗಳ ಸ್ಪೂರ್ತಿಯಿಂದ ರಾಯಚೂರು ಜಿಲ್ಲೆಯಲ್ಲಿ 'ಮನೆಗೊಂದು ಗೋವು' ಎಂಬ ಅಭಿಯಾನವನ್ನು ಆರಂಭಿಸಿ ಗೋರಕ್ಷಣಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.

ಬಳ್ಳಾರಿ ಜಿಲ್ಲೆ ಸಿರಗುಪ್ಪಿ ಶ್ರೀಕೃಷ್ಣ ನಗರದ ಶ್ರೀ ಗುರುಬಸವ ಮಠದ ಪೂಜ್ಯ ಮ.ನಿ.ಪ್ರ. ಬಸವಭೂಷಣ ಸ್ವಾಮೀಜಿ ಉಪಸ್ಥಿತರಿದ್ದರು.

ಪಶುವೈದ್ಯರಾಗಿ ಸುಮಾರು 53 ವರ್ಷ ಗೋಸೇವೆ ಮಾಡಿದ ಕುಮಟಾದ ಡಾ. ವೆಂಕಟ್ರಮಣ ಜಿ ಶೆಟ್ಟಿ ಹಾಗೂ ಪಂಚಗವ್ಯ ಚಿಕಿತ್ಸೆಯ ಮೂಲಕ ವೈದ್ಯಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಡಾ. ಕವಿತಾ ಜೈನ್ ಇವರುಗಳಿಗೆ ಗೋ ಸೇವಾ ಪುರಸ್ಕಾರವನ್ನು ನೀಡಲಾಯಿತು.

ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಸವಭೂಷಣ ಸ್ವಾಮೀಜಿ 'ಪ್ರಕೃತಿ ಪಾಠ' ಪುಸ್ತಕವನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು.

ಗುಡೇಅಂಗಡಿ, ಧಾರೇಶ್ವರ, ಹೆಗಡೆ ಮತ್ತು ಮಿರ್ಜಾನ್ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ರವೀಂದ್ರ ಭಟ್ ಸೂರಿ ಹಾಗೂ ರಮ್ಯಾ ಸುರೇಶ್ ಮಾಬ್ಲಡ್ಕ ನಿರೂಪಿಸಿದರು. ಅನಂತರ ಶ್ರೀಮತಾ ಹವ್ಯಕ ಭಜನಾ ತಂಡ ಬದಿಯಡ್ಕ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು.

ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಗುರುಚರಿತ್ರೆ ಪಾರಾಯಣ, ಶ್ರೀದುರ್ಗಾ ತ್ರಿಕಾಲಪೂಜೆ, ರಾಮತಾರಕ ಮಂತ್ರ ಜಪ, ಹನುಮಾನ್ ಚಾಲೀಸ್ ಪಾರಾಯಣ, ಧನ್ವಂತರಿ ಮಂತ್ರ ಜಪ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited