ಅಹಮದಾಬಾದ್ : ನಮ್ಮ ದೇಶದ ಬಡವರನ್ನು ಸಮರ್ಥರನ್ನಾಗಿ, ಸ್ವಾಭಿಮಾನಿಗಳನ್ನಾಗಿ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಅಹಮದಾಬಾದ್ ನಲ್ಲಿ ಗುಜರಾತ್ ಸರ್ಕಾರದ ವಿವಿಧ ಕಾಮಗಾರಿ ಹಾಗೂ ಸ್ವಾಲಂಭನಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇನ್ನೊಬ್ಬರ ಮುಂದೆ ಕೈಚಾಚುವುದು ಸೂಕ್ತವಲ್ಲ, ಬಡವರಿಗೆ ಸೂಕ್ತ ಅವಕಾಶದ ಅವಶ್ಯಕತೆಯಿದೆ ಎಂದರು.
ಇಂದು ಸ್ವಾವಲಂಭನಾ ಯೋಜನೆ ಶುಭಾರಂಭವಾಗಿದೆ. ಈ ಯೋಜನೆಗಳನ್ನು ಬಳಸಿಕೊಂಡು ಬಡವರು ಸ್ವಾವಲಂಭಿಗಳಾಗಬೇಕು. ಬಡವರು ಸಮರ್ಥರಾಗಬೇಕು ಎಂದರು.
ಇದು ಮಹಾತ್ಮಾ ಗಾಂಧೀಜಿಯವರ ಪುಣ್ಯಭೂಮಿ. ಗುಜರಾತ್ ನ ಗ್ರಾಮೀಣ ಜನರಲ್ಲಿ ಸ್ವಾವಲಂಭನೆಯ ಕಳೆಯಿದೆ. ಕ್ಷೀರ ಕ್ರಾಂತಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಪಶುಸಂಗೋಪನೆ, ಹಾಲು ಉತ್ಪಾದನೆಯಲ್ಲಿ ಗುಜರಾತ್ ಮುಂದಿದೆ. ಆದರೆ ಮಹಿಳೆಯರು ಇಷ್ಟಕ್ಕೇ ಸೀಮಿತವಾಗಬಾರದು, ಇನ್ನಷ್ಟು ಸ್ವಾವಲಂಭಿಗಳಾಗಬೇಕು ಎಂದು ತಿಳಿಸಿದರು.