ಬೆಂಗಳೂರು : ರಾಜ್ಯದಲ್ಲಿ ಹೊಸ ಕ್ರೀಡಾ ನೀತಿ ಜಾರಿಗೆ ತರಲಾಗುವುದು ಮುಂದಿನದಿನಗಳಲ್ಲಿ ಕ್ರೀಡಾಪಟುಗಳಿಗೆ ಭಾರೀ ಕೊಡುಗೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂದು ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ರಾಜ್ಯದ ಕ್ರೀಡಾಪಟುಗಳ ಅಸಮಾಧಾನ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಕ್ರೀಡಾ ಸಚಿವ ಅಭಯಚಂದ್ರ ಜೈನ್, ದೇಶಪ್ರೇಮದ ಜತೆಗೆ ರಾಜ್ಯಪ್ರೇಮವೂ ಇರಬೇಕು. ರಾಜ್ಯದ ಕ್ರೀಡಾಪಟುಗಳು ಬೇರೆ ರಾಜ್ಯಕ್ಕೆ ಹೋಗಲು ಬಿಡುವುದಿಲ್ಲ ಎಂದರು.
ಶೀಘ್ರದಲ್ಲಿಯೇ ನಮ್ಮ ಸರ್ಕಾರ ಕ್ರೀಟಾಪಟುಗಳನ್ನು ಉತ್ತಮವಾಗಿ ನಡೆಸುಕೊಳ್ಳಲಿದ್ದು, ಸರ್ಕಾರಿ ಕೆಲಸ ನೀಡುವ ಬಗ್ಗೆಯೂ ಚಿಂತನೆ ನಡೆಸಲಿದೆ. ನಮ್ಮ ರಾಜ್ಯದ ಕ್ರೀಡಾಪಟುಗಳು ಬೇರೆ ರಾಜ್ಯಗಳ ಜತೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸ ಕ್ರೀಡಾ ನೀತಿ ಜಾರಿಗೆ ತಂದು, ಶೀಘ್ರದಲ್ಲಿಯೇ ಕ್ರೀಡಾಪಟುಗಳಿಗೆ ಭಾರೀ ಕೊಡುಗೆ ನೀಡಲಾಗುವುದು, ಕ್ರೀಡಾಪಟುಗಳು ಸ್ವಲ್ಪ ತಾಳ್ಮೆಯಿಂದರಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಘೋಷಿಸಿರುವ ನಗದು ಬಹುಮಾನದ ಬಗ್ಗೆ ಏಷ್ಯನ್ ಗೇಮ್ಸ್ ನ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ಎಂ,ಆರ್.ಪೂವಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೇರೆ ರಾಜ್ಯಕ್ಕೆ ಹೋಗುವುದಾಗಿ ತಿಳಿಸಿದ್ದರು.
ಅಲ್ಲದೇ ಏಷ್ಯನ್ ಗೇಮ್ಸ್ ನ ಕಬಡ್ಡಿಯಲ್ಲಿ ಚಿನ್ನ ಗೆದ್ದ ಮಮತಾ ಪೂಜಾರಿ ಕೂಡ ರಾಜ್ಯ ಸರ್ಕಾರ ಮೊದಲು 25ಲಕ್ಷ ರೂ ಘೋಷಿಸಿತ್ತು. ಒಂದುವೇಳೆ ಈಗ 10 ಲಕ್ಷ ರೂ ನೀಡಿದರೆ ಅದನ್ನು ನಿರಾಕರಿಸುವಾದಿ ಹೇಳಿದ್ದರು.