ಹಾಸನ : ಶ್ರೀರಾಮ ಸೇನೆ ರಾಜ್ಯ ಘಟಕದ ವತಿಯಿಂದ ಅ.29ರಿಂದ ನ.2ರವರೆಗೆ 5ನೇ ವರ್ಷದ ದತ್ತಮಾಲಾ ಅಭಿಯಾನ ಆರಂಭವಾಗಲಿದೆ ಎಂದು ಜಾನೇಕೆರೆ ಹೇಮಂತ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ದತ್ತಪೀಠಕ್ಕೆ ಉಚಿತವಾಗಿ ಯುವಕರನ್ನು ಕರೆದುಕೊಂಡು ಹೋಗಲಾಗುತ್ತದೆ. ಶ್ರೀರಾಮಸೇನೆ ಕಾರ್ಯಕರ್ತರು ಸಾಗರೋಪಾದಿಯಲ್ಲಿ ದತ್ತಪೀಠಕ್ಕೆ ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ ಎಂದರು.
ಸಕಲೇಶಪುರದಲ್ಲಿ ನ.1ರಂದು ಸಂಜೆ 6.30ಕ್ಕೆ ಪಂಜಿನ ಮೆರವಣಿಗೆ ಹಾಗೂ ಶೋಭಾಯಾತ್ರೆ, ದತ್ತಮಾಲಾ ಅಭಿಯಾನವನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.
ನ.2ರಂದು ಹಾಸನದಿಂದ ಬೆಳಿಗ್ಗೆ 7.30ಕ್ಕೆ ದತ್ತ ಪೀಠಕ್ಕೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ದತ್ತಮಾಲಾಧಾರಿಗಳಾಗಿ ಆಗಮಿಸುವ ಭಕ್ತಾದಿಗಳಿಗೆ ಕೇಸರಿ ಪಂಚೆ, ಕೇಸರಿ ಟವಲ್ ಹಾಗೂ ಮಾಲೆ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ದತ್ತಪೀಠ ಅಭಿವೃದ್ಧಿ, ಹಿಂದೂ ಅರ್ಚಕರ ನೇಮಕ ಸೇರಿದಂತೆ ಹಲವು ಬೇಡಿಕೆಗಲನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದ್ದು, ಈ ವರಗೆ ಸರ್ಕಾರದ ವತಿಯಿಂದ ಯಾವುದೇ ರೀತಿ ಸ್ಪಂದನೆ ಸಿಕ್ಕಿಲ್ಲ, ಹೀಗೆ ಮುಂದುವರಿದರೆ ತೀವ್ರ ಸ್ವರೂಪದ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.