ನವದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾಧ್ರ, ನ.1ರಂದು ಮಾಧ್ಯಮ ಪ್ರತಿನಿಧಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.
ಹರ್ಯಾಣದಲ್ಲಿ ವಾಧ್ರ ನಡೆಸಿರುವ ಭೂ ಅಕ್ರಮದ ಬಗ್ಗೆ ವರದಿಗಾರನ ಪ್ರಶ್ನೆಗೆ ಕೋಪಗೊಂಡ ವಾಧ್ರ, ಮಾಧ್ಯಮ ಪ್ರತಿನಿಧಿಯ ಮೈಕ್(ಧ್ವನಿವರ್ಧಕವನ್ನು) ನೂಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿ.ವಿ ಸುದ್ದಿ ವಾಹಿಸಿಗಳು ತೋರಿಸುತ್ತಿರುವ ದೃಶ್ಯಾವಳಿಗಳಲ್ಲಿ, ಕೋಪೋದ್ರಿಕ್ತ ವಾದ್ರಾ ಆ ವರದಿಗಾರನ್ನು, ನಿನಗೆ ತಲೆ ಕೆಟ್ಟಿದೆಯೇ ಎಂದು ಪ್ರಶ್ನಿಸಿದ್ದಾರೆ.
"ಆರ್ ಯು ಸೀರಿಯಸ್..? ಆರ್ ಯು ಸೀರಿಯಸ್..? ಆರ್ ಯು ಸಿರಿಯಸ್..? ಪುಟ್ ಯುವರ್ ಕ್ಯಾಮರಾ ಆಫ್.. ಆರ್ ಯು ನಟ್ಸ್..? ಡಿಲಿಟ್ ದ ವಿಡಿಯೋ ಫೂಟೇಜ್.." ಎಂದು ಮಾಧ್ಯಮ ಪ್ರತಿನಿಧಿಯ ಮೇಲೆ ಹರಿಹಾಯ್ದಿದ್ದಾರೆ.
ಇತ್ತೀಚೆಗಷ್ಟೇ ಹರಿಯಾಣಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ವಾದ್ರಾ ಅವರ ಭ್ರಷ್ಟಾಚಾರ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ. ಇದರಿಂದ ವಿಚಲಿತರಾದಂತೆ ಕಂಡು ಬಂದಿರುವ ವಾದ್ರಾ, ನಿನ್ನೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದ್ದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮತ್ತಷ್ಟು ಕೆಂಡಾಮಂಡಲರಾದ ವಾಧ್ರ, ಮೈಕ್ ಕಿತ್ತೆಸೆದು ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.