ಕಠ್ಮಂಡು : ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನ ಮಂತ್ರಿ ಸುಶೀಲ್ ಕೊಯಿರಾಲ ಬುಧವಾರ ಕಾಠ್ಮಂಡು-ದೆಹಲಿ ಬಸ್ ಸೇವೆ "ಪಶುಪತಿನಾಥ್ ಎಕ್ಸ್ ಪ್ರೆಸ್" ಗೆ ಚಾಲನೆ ನೀಡಿದ್ದಾರೆ.
ಹಸಿರು ನಿಶಾನೆ ತೋರುವುದಕ್ಕಿಂತಲೂ ಮುಂಚೆ ಬಲೂನುಗಳು ಮತ್ತು ಹೂಗಳಿಂದ ಅಲಂಕರಿಸಿದ ಬಸ್ಸಿನೊಳಕ್ಕೆ ಹೊಕ್ಕ ಇಬ್ಬರೂ ಪ್ರಧಾನಿಗಳು ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದರು.
ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಈ ಬಸ್ ಸೇವೆ ಸಹಕಾರಿಯಾಗಲಿದೆ ಎಂದು ಬಣ್ಣಿಸಲಾಗಿದ್ದು ದ್ವಿಪಕ್ಷೀಯ ಸಂಬಂಧ ಕೂಡ ಬಲಗೊಳ್ಳಲಿದೆ ಎನ್ನಲಾಗಿದೆ.
ಈ ಬಸ್ಸಿನ ಮಾರ್ಗ ಹೀಗಿದೆ. ಕಾಠ್ಮಂಡು, ಭೈರಾವ, ಸನೌಲಿ, ಗೋರಕ್ ಪುರ, ಲಕ್ನೌ ಮತ್ತು ನವದೆಹಲಿ.