ನವದೆಹಲಿ : ಯೋಗಗುರು ಬಾಬಾ ರಾಮ್ ದೇವ್ ಹಾಗೂ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ತಮಗೆ ಪದ್ಮ ಪ್ರಶಸ್ತಿ ಬೇಡ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವದಂದು ಘೋಷಣೆಯಾಗಲಿರುವ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ರಾಮ್ ದೇವ್ ಹಾಗೂ ರವಿಶಂಕರ್ ಗುರೂಜಿ ಹೆಸರು ಕೂಡ ಇದೆ ಎಂಬ ಸುದ್ದಿ ಪ್ರಕಟವಾಗಿತ್ತು.
ಈ ಹಿನ್ನಲೆಯಲ್ಲಿ ಇವರಿಬ್ಬರೂ ತಮಗೆ ಪ್ರಶಸ್ತಿ ಬೇಡ ಎಂದು ಹೇಳಿಕೊಂಡಿದ್ದಾರೆ.
ಬಾಬಾ ರಾಮ್ದೇವ್ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ನಾನೊಬ್ಬ ವಿರಾಗಿಯಾಗಿರುವ ಕಾರಣ ಅಂತಹ ಯಾವುದೇ ಗೌರವ, ಪ್ರಶಸ್ತಿಯನ್ನು ಪಡೆಯಲು ಇಚ್ಛಿಸುವುದಿಲ್ಲ ಎಂದಿದ್ದಾರೆ.