ನವದೆಹಲಿ : ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲ. ನಾವು ಧರ್ಮ ಸಹಿಷ್ಣುಗಳು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲ. ನಾವು ಧರ್ಮ ಸಹಿಷ್ಣುಗಳು. ಈ ಬಗ್ಗೆ ಉತ್ತಮ ಉದಾಹರಣೆ ಎಂದರೆ, ಒಬಾಮಾ ಎದುರು ದಲೈಲಾಮ ಕುಳಿತುಕೊಂಡಿರುವುದು ಎಂದರು.
ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ. ಭಾರತ ಪ್ರವಾಸ ವೇಳೆ ನಾನು, ಮಿಷೆಲ್ ನೋಡಿದ್ದೇವೆ. ಭಾರತದಲ್ಲಿ ಕಂಡುಬರುತ್ತಿರುವ ಧಾರ್ಮಿಕ ಅಸಹಿಷ್ಣುತೆಯನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕಂಡಿದ್ದರೆ ಆಘಾತಕ್ಕೊಳಗಾಗುತ್ತಿದ್ದರು ಎಂದು ಟೀಕೆ ಮಾಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಭಾರತ ಈ ಮೂಲಕ ತಿರುಗೇಟು ನೀಡಿದೆ.
ಟಿಬಿಟಿಯನ್ ನಾಯಕ ದಲೈಲಾಮಾ ಅವರನ್ನು ಚೀನಾ ಗಡಿಪಾರು ಮಾಡಿದಾಗ ಅವರಿಗೆ ಆಶ್ರಯ ಕೊಟ್ಟಿದ್ದು ಭಾರತ. ಅವರು ಭಾರತದಲ್ಲಿ 1959ರಿಂದ ನೆಲೆಸಿದ್ದಾರೆ. ಧಾರ್ಮಿಕ ಸಹಿಷ್ಣುತೆ ಬಗ್ಗೆ ಭಾರತಕ್ಕೆ ಆಳವಾದ ಇತಿಹಾಸ ಇದೆ. ಯಾವುದೇ ಘಟನೆಗಳು ಭಾರತದ ಸಹಿಷ್ಣು ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.