BW News Bureau : ಬೆಂಗಳೂರು ನಗರದಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೂರು ದಿನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಪಕ್ಷದ ಸಭೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಏ.2ರಂದು ನಗರಕ್ಕೆ ಆಗಮಿಸಲಿದ್ದು, ಏ.4ರಂದು ದೆಹಲಿಗೆ ವಾಪಸಾಗಲಿದ್ದಾರೆ. ಪ್ರಧಾನಿಯವರ ಭದ್ರತೆ ಹಿನ್ನೆಲೆಯಲ್ಲಿ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
ಏ.2 ರಂದು ಮಧ್ಯಾಹ್ನ ಹಳೆ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರಳುವ ಹಿನ್ನೆಲೆಯಲ್ಲಿ ಇಸ್ರೋ ಜಂಕ್ಷನ್, ಮಣಿಪಾಲ್ ಸೆಂಟರ್, ಕೆ.ಆರ್.ರಸ್ತೆ, ಕಬ್ಬನ್ ರಸ್ತೆ, ಬಿಆರ್ವಿ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತ, ಕ್ವೀನ್ಸ್ ರಸ್ತೆ, ಸಿಟಿಒ ವೃತ್ತದಿಂದ ರಾಜಭವನದವರೆಗಿನ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಹಾಗೆಯೇ, ಅಂದು ರಾಜಭವನ, ಎಲ್.ಎಚ್.ರಸ್ತೆ, ಬಸವೇಶ್ವರ ವೃತ್ತ, ಹಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ರಸ್ತೆ, ಟಿ.ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್, ಕೆ.ಕೆ.ರಸ್ತೆ ಹಾಗೂ ಲಲಿತ್ ಅಶೋಕ ಹೋಟೆಲ್ ಭಾಗದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗ ಬಳಸಬೇಕಿದೆ.
ಏ. 3ರಂದು ಸಂಜೆ ಕೆ.ಕೆ.ರಸ್ತೆ, ವಿಂಡ್ಸರ್ ಮ್ಯಾನರ್, ಚೌಡಯ್ಯ ರಸ್ತೆ, ಹಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ರಸ್ತೆ, ರಾಜಭವನ್, ಇನ್ಫೆಂಟ್ರಿ ರಸ್ತೆ, ಕಾಫಿ ಬೋರ್ಡ್, ಕ್ವೀನ್ಸ್ ರಸ್ತೆ, ಸಿದ್ದಲಿಂಗಯ್ಯ ವೃತ್ತ, ವಿಠಲ ಮಲ್ಯ ರಸ್ತೆ, ರಿಚ್ ಮಂಡ್ ವೃತ್ತ, ಕೆ.ಎಚ್.ರಸ್ತೆ, ಲಾಲ್ ಬಾಗ್ ಮುಖ್ಯದ್ವಾರ, ಲಾಲ್ ಬಾಗ್ ಪಶ್ಚಿಮದ್ವಾರ, ಶೇಷಮಹಲ್ ವೃತ್ತ, ನ್ಯಾಷನಲ್ ಕಾಲೇಜು ಮೇಲ್ಸೇತುವೆ, ಶಂಕರಮಠ ಜಂಕ್ಷನ್, ಪಿಎಂಕೆ ರಸ್ತೆ ಹಾಗೂ ನ್ಯಾಷನಲ್ ಕಾಲೇಜು ಮೈದಾನದವರೆಗೆ ಸಂಚಾರ ನಿರ್ಬಂಧ ಇರಲಿದೆ.
ಅದೇ ದಿನ ರಾತ್ರಿ ನ್ಯಾಷನಲ್ ಕಾಲೇಜು ಮೈದಾನ, ಪಿಎಂಕೆ ರಸ್ತೆ, ನ್ಯಾಷನಲ್ ಕಾಲೇಜು ಮೇಲ್ಸೇತುವೆ, ಲಾಲ್ ಬಾಗ್ ಪಶ್ಚಿಮ ದ್ವಾರ, ಆರ್.ವಿ.ರಸ್ತೆ, ಕನಕನಪಾಳ್ಯ, ಅಶೋಕ ಪಿಲ್ಲರ್, ಸಿದ್ದಾಪುರ ವೃತ್ತ, ಕೆಎಸ್ ರಸ್ತೆ, ರಿಚ್ ಮಂಡ್ ಮೇಲ್ಸೇತುವೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಎಂ.ಜಿ.ರಸ್ತೆ, ಕ್ವೀನ್ಸ್ ವೃತ್ತ, ತಿಮ್ಮಯ್ಯ ವೃತ್ತ ಹಾಗೂ ರಾಜಭವನ ಮಾರ್ಗವಾಗಿ ಪ್ರಧಾನಮಂತ್ರಿ ಸಂಚರಿಸಲಿದ್ದು, ಸಂಚಾರ ವ್ಯತ್ಯಯವಾಗಲಿದೆ.
ಏ. 4ರಂದು ಮಧ್ಯಾಹ್ನ ಲಲಿತಾ ಅಶೋಕ ಹೋಟೆಲ್, ಕೆ.ಕೆ.ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಹೈಗ್ರೌಂಡ್ಸ್ ಪೊಲೀಸ್ ಠಾಣೆ, ರಾಜಭವನ ವೃತ್ತ, ಅಲಿ ಅಸ್ಕರ್ ರಸ್ತೆ, ಕಾಫಿ ಬೋರ್ಡ್ ಜಂಕ್ಷನ್, ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕೆ.ಆರ್.ರಸ್ತೆ ಜಂಕ್ಷನ್, ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್, ವೆಬ್ಸ್ ಜಂಕ್ಷನ್, ಟ್ರಿನಿಟಿ ವೃತ್ತ, ಎಎಸ್ಸಿ ಸೆಂಟರ್, ಸಿ.ಬಿ.ರಸ್ತೆ, ದೊಮ್ಮಲೂರು, ಇಂದಿರಾನಗರ 100 ಅಡಿ ರಸ್ತೆ, ಮಣಿಪಾಲ್ ಆಸ್ಪತ್ರೆ ಜಂಕ್ಷನ್, ಇಸ್ರೋ ಜಂಕ್ಷನ್ ಮೂಲಕ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.