ಮುಂಬೈ : ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಆದೇಶದಿಂದ ನಿರುದ್ಯೋಗಿಗಳಾಗಿರುವವರಿಗೆ ನೆರವಾಗುವ ಮತ್ತು ಗೋಮಾಂಸ ವ್ಯಾಪಾರ ಪ್ರೋತ್ಸಾಹಿಸುವ ಉದ್ದೇಶದಿಂದ ಅಖೀಲ ಭಾರತ ಮಿಲ್ಲಿ ಕೌನ್ಸಿಲ್, ಭಾರತೀಯ ಎತ್ತು ಹಾಗೂ ಹಸುಗಳ ವಧೆ ಬದಲು ವಿದೇಶದ ಜರ್ಸಿ ಹಸುಗಳ ವಧೆ ಉತ್ತೇಜಿಸುವ ಆಗ್ರಹ ಮುಂದಿಟ್ಟಿದೆ.
ಭಾರತೀಯ ತಳಿ ಸಂರಕ್ಷಣೆ ಈ ಕ್ರಮದ ಉದ್ದೇಶ ಎಂದು ಕೌನ್ಸಿಲ್ ನ ಪದಾಧಿಕಾರಿ ಎಂ.ಎ.ಖಲೀದ್ ಹೇಳಿದ್ದಾರೆ.
ಗೋರಕ್ಷಣೆಗೆಂದು ದೇಶದ ವಿವಿಧ ಕಡೆ 120 ಕಾಮಧೇನು ನಗರ (ಗೋಶಾಲೆ) ಸ್ಥಾಪಿಸಲು ಆರ್.ಎಸ್.ಎಸ್ ಚಿಂತನೆ ನಡೆಸಿದೆ.