ಹಾಸನ : ರಾಜಕೀಯವಾಗಿ ತಮ್ಮಷ್ಟು ಪೆಟ್ಟು ತಿಂದ ರಾಜಕಾರಣಿ ಮತ್ತೂಬ್ಬರಿರಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಅಲ್ಲದೆ, ರಾಜಕೀಯದಲ್ಲಿ ತಮ್ಮನ್ನು ವಿಲನ್ ಆಗಿಯೇ ಹೆಚ್ಚು ಚಿತ್ರಿಸಲಾಯಿತು ಎಂದು ಕಿಡಿಕಾರಿದ್ದಾರೆ.
ಹಾಸನದಲ್ಲಿ ನಡೆದ ಪತ್ರಕರ್ತರ 32ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ರಾಹ್ಮಣ, ಲಿಂಗಾಯತ ಹಾಗೂ ಅಹಿಂದ ವರ್ಗಗಳ ವಿರೋಧಿ ಎಂದು ನನ್ನನ್ನು ಬಿಂಬಿಸಲಾಯಿತು. ಆಯಾಯ ಕಾಲಘಟ್ಟದಲ್ಲಿ ಮಾಧ್ಯಮಗಳಿಂದಲೂ ಪೆಟ್ಟು ತಿಂದಿದ್ದೇನೆ. ನಾನು ಪ್ರಧಾನಿಯಾಗಿದ್ದ ವೇಳೆ ಕೈಗೊಂಡ ತೀರ್ಮಾನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದುರ್ಬೀನು ಬಳಸಿ ಪರಿಶೀಲಿಸುತ್ತಿದ್ದಾರೆ. ಇವೆಲ್ಲವೂ ನನ್ನ ಗಮನಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ 3 ಅಂಗಗಳು ಹಳಿತಪ್ಪಿದ್ದು, ನಾಲ್ಕನೇ ಅಂಗವೆಂದು ಗುರುಸಿಕೊಂಡಿರುವ ಮಾಧ್ಯಮ ರಂಗ ಕೂಡ ಶ್ರೀಮಂತರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಹಿಡಿತದಲ್ಲಿದೆ. ಈ ಬೆಳವಣಿಗೆಯಿಂದ ನಿಷ್ಪಕ್ಷಪಾತ ಮನೋಭಾವನೆಯ ವರದಿಗಾರರೂ ಕೂಡ ತೊಂದರೆ ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.