ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೆ ಆರ್.ಎಸ್.ಎಸ್ ನಿಂದ ಯಾವುದೇ ಒತ್ತಡ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಹಿರಿಯ ಸಚಿವರು ಮತ್ತು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನಡುವೆ ಇತ್ತೀಚೆಗೆ ನಡೆದ ಮಾತುಕತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿಲ್ಲ ಎಂದ ಅವರು, ರಾಜಕೀಯ ವಿಚಾರವಾಗಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು.
ನಾನು, ಪರಿಕ್ಕರ್ ಹಾಗೂ ರಾಜನಾಥ್ ಸಿಂಗ್ ಆರ್.ಎಸ್.ಎಸ್ ಸದಸ್ಯರು. ನಾನು ಸಂಘದ ಸದಸ್ಯ ಎಂದು ಹೇಳಿಕೊಳ್ಳಲು ಯಾವುದೇ ಭಯ ಇಲ್ಲ. ಹಾಗಂತ ಸಂಘವು ನಮ್ಮ ಮೇಲೆ ಒತ್ತಡ ಹೇರುವುದಾಗಲಿ ಅಥವಾ ನಿರ್ದೇಶನ ನೀಡುವ ಕೆಲಸವಾಗಲಿ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.