ನವದೆಹಲಿ : ದೇಶದ ಪ್ರಜಾಪ್ರಭುತ್ವ ಬೆದರಿಕೆಯ ನೆರಳಲ್ಲಿ ಸಾಗುತ್ತಿದೆ. ಭಾರತದ ಜಾತ್ಯಾತೀತ ನೀತಿಗೆ ಪ್ರಧನಿ ನರೇಂದ್ರ ಮೋದಿ ಸರ್ಕಾರ ಬೆದರಿಕೆಹಾಕುತ್ತಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕಿಡಿಕಾರಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಕಚೇರಿಯನ್ನು ನಾನಾಗಲಿ, ನನ್ನ ಕುಟುಂಬ ಅಥವಾ ಗೆಳೆಯರು ಯಾರೂ ಕೂಡಾ ದುರ್ಬಳಕೆ ಮಾಡಿಕೊಂಡಿಲ್ಲ. ನಿಮ್ಮ ಸ್ವಂತ ಕೆಲಸಗಳಿಗೆ ಸರ್ಕಾರದ ಕಛೇರಿಗಳನ್ನು ಬಳಸಬೇಡಿ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ಕೇಂದ್ರ ಎನ್.ಡಿ.ಎ ಸರ್ಕಾರದ ಸಾಧನೆ ಶೂನ್ಯ. ಯುಪಿಎ ಸರ್ಕಾರದ ಯೋಜನೆಗಳಿಗೆ ಮರುನಾಮಕರಣ ಮಾಡಲಾಗುತ್ತಿದೆ ಅಷ್ಟೇ. ನಮ್ಮದೇ ಯೋಜನೆಗಳನ್ನು ಕೇಂದ್ರ ಜಾರಿಗೆ ತರುತ್ತಿದೆ. ಮೇಕ್ ಇನ್ ಇಂಡಿಯಾ ಯುಪಿಎ ಸರ್ಕಾರದ ಯೋಜನೆ ಎಂದು ತಿಳಿಸಿದರು.
ನಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ದರ 8.05ರಷ್ಟಿತ್ತು. ಹೊಸ ಸರ್ಕಾರ ಬಂದ ಬಳಿಕ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಆರ್ಥಿಕತೆ ಸುಧಾರಿಸಲು ಯಾವುದೇ ನೀತಿ ಜಾರಿ ಮಾಡಿಲ್ಲ. ಮೋದಿ ಸರ್ಕಾರ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚ್ಜಾರ ಆರೋಪ ಮಾಡುತ್ತಿದೆ. ಆದರೆ ದೇಶದಲ್ಲಿನ ಭ್ರಷ್ಟಾಚಾರ ತೊಡೆದುಹಾಕಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.