ಬೆಂಗಳೂರು : ಆಷಾಢ ಮಾಸ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಇಳಿಕೆಯಾಗಿದೆ. ಬೀನ್ಸ್, ಕ್ಯಾರೆಟ್,ಹೂಕೋಸು ದಪ್ಪ ಮೆಣಸಿನಕಾಯಿ, ಟೊಮೇಟೋ, ಬೀಟ್ರೂಟ್ ಸೇರಿದಂತೆ ಹಲವು ತರಕಾರಿಗಳ ದರಗಳು ಇಳಿದಿವೆ.
ಈ ಬಾರಿ 2 ತಿಂಗಳು ಆಷಾಢ ಮಾಸವಿರುವುದರಿಂದ ತರಕಾರಿ ಬೆಲೆ ಇನ್ನು ಎರಡು ತಿಂಗಳು ಏರಿಕೆಯಾಗುವ ಸಾಧ್ಯತೆ ಕಡಿಮೆ ಇದೆ. ಜೊತೆಗೆ ಮಾರುಕಟ್ಟೆಯಲ್ಲಿ ತರಕಾರಿ ಪೂರೈಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಮಳೆ ಹೆಚ್ಚು ಸುರಿದರೆ ಬೆಳೆ ನಾಶವಾಗಲಿದೆ ಎಂಬ ಆತಂಕದಲ್ಲಿ ರೈತರು ತರಕಾರಿಯನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಆದರೆ ಈರುಳ್ಳಿ ಬೆಲೆ ಮಾತ್ರ ಏರಿಕೆಯಾಗುತ್ತಿದೆ.
ಒಟ್ಟಿನಲ್ಲಿ ತರಕಾರಿ ಬೆಲೆ ಇಳಿಕೆ ಗ್ರಾಹಕರಲ್ಲಿ ಸಂತಸ ತಂದಿದೆ.