ಮುಂಬೈ : ಆರನೇ ಐಪಿಲ್ ಪಂದ್ಯದಲ್ಲಿ ಮುಂಬಯಿ ಉದ್ಯಮಿ ಒಬ್ಬರಿಂದ ಲಂಚ ತೆಗೆದುಕೊಂಡಿದ್ದಾರೆಂದು ಲಲಿತ್ ಮೋದಿಯಿಂದ ಆರೋಪಕ್ಕೆ ಗುರಿಯಾಗಿರುವ ಮೂವರು ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಸುರೇಶ್ ರೈನಾ, ರವೀಂದ್ರ ಜಡೇಜಾ ಮತ್ತು ಬ್ರಾವೋ ಅವರಿಗೆ ಬಿಸಿಸಿಐ ಕ್ಲೀನ್ ಚಿಟ್ ನೀಡಿದೆ.
ರೈನಾ, ಜಡೇಜ ಮತ್ತು ಬ್ರಾವೋಗೆ ಮುಂಬಯಿ ಉದ್ಯಮಿ ತಲಾ 20 ಕೋಟಿ ರೂ. ನಗದು ಮತ್ತು ಸೊತ್ತುಗಳನ್ನು ಲಂಚವಾಗಿ ನೀಡಿದ್ದಾರೆಂದು ಆರೋಪಿಸಿ ಲಲಿತ್ ಮೋದಿ 2013ರ ಜೂನ್ ನಲ್ಲಿ ಐಸಿಸಿಗೆ ಬರೆದಿರುವ ಪತ್ರ ತನಗೆ ತಲುಪಿರುವುದನ್ನು ಐಸಿಸಿ ದೃಢೀಕರಿಸಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು, ಲಲಿತ್ ಮೋದಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.
ರೈನಾ, ಜಡೇಜ ಮತ್ತು ಬ್ರಾವೋ ಇವರು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದು ಅವರು ಅಂತಾರಾಷ್ಟ್ರೀಯ ಕಾನೂನು ವ್ಯಾಪ್ತಿಯನ್ನು ಹೊಂದಿರುತ್ತಾರೆ ಮತ್ತು ಐಸಿಸಿ ಪರಿವೀಕ್ಷಣೆಗೆ ಒಳಪಡುತ್ತಾರೆ. ಈ ಮೂವರು ಆಟಗಾರರ ವಿರುದ್ಧ ಐಸಿಸಿ ಬಳಿ ಯಾವುದೇ ದೋಷಾರೋಪದ ಪ್ರಕರಣಗಳಿಲ್ಲ. ಅಂತೆಯೇ ಅದು ಅವರಿಗೆ ಕ್ಲೀನ್ ಚಿಟ್ ಆಗಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.