ಡೆಹ್ರಾಡೂನ್ : ಉತ್ತರಖಂಡದಲ್ಲಿ ಚಾರ್ ಧಾಮ್ ಯಾತ್ರೆಯ ಮಾರ್ಗ ಮತ್ತು ಇನ್ನು ಹಲವು ಪ್ರದೇಶಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಉತ್ತರಖಂಡ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.
ಪ್ರಾಣಹಾನಿ, ಆಸ್ತಿಹಾನಿ ತಡೆಗಟ್ಟಲು, ಯಾತ್ರಾರ್ಥಿಗಳ ರಕ್ಷಣೆಗೆ ಅಧಿಕಾರಿಗಳು ಜಾಗೂರುಕರಾಗಿರಬೇಕೆಂದು ಸರ್ಕಾರ ಸೂಚನೆ ನೀಡಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿಯವರ ಮಾಧ್ಯಮ ಸಹಾಯಕ ಸುರೇಂದ್ರ ಕುಮಾರ್ ತಿಳಿಸಿದ್ದಾರೆ.
ಉತ್ತರಖಂಡ ವಿಪತ್ತು ನಿರ್ವಹಣೆ ಮತ್ತು ಉಪಶಮನ ಕೇಂದ್ರದ ಮುನ್ನೆಚ್ಚರಿಕೆಯಂತೆ ಭಾನುವಾರ ಸಂಜೆಯಿಂದ ಎರಡು ದಿನ ಸುಮಾರು 160 ಮಿಮೀ ಮಳೆಯಾಗುವ ಸಂಭವವಿದೆ.
2013 ರಲ್ಲಿ ಸುರಿದ ಮಳೆಯಿಂದ ಉತ್ತರಖಂಡದಲ್ಲಿ ಪ್ರವಾಹ ಉಂಟಾಗಿ ಭಾರಿ ನಷ್ಟ ಸಂಭವಿಸಿತ್ತು.