ನವದೆಹಲಿ : ಪ್ಯಾರಿಸ್ ನಲ್ಲಿ ಹವಾಮಾನ ಬದಲಾವಣೆ ಒಪ್ಪಂದಕ್ಕೆ 195 ದೇಶಗಳು ಸಹಿ ಹಾಕಿದ ನಂತರ, ಈ ಐತಿಹಾಸಿಕ ಒಪ್ಪಂದದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇದು ಹವಾಮಾನ ನ್ಯಾಯಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ.
ಪ್ಯಾರಿಸ್ ಒಪ್ಪಂದದ ಫಲಿತಾಂಶದಲ್ಲಿ ಯಾರೂ ವಿಜೇತರೂ ಅಲ್ಲ ಅಥವಾ ಸೋತವರು ಅಲ್ಲ. ಇದು ಹವಾಮಾನ ನ್ಯಾಯಕ್ಕೆ ಸಿಕ್ಕ ಜಯ. ನಾವೆಲ್ಲರೂ ಭವಿಷ್ಯದ ಹಸಿರೀಕರಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಒಪ್ಪಂದ ವಿಶ್ವ ನಾಯಕರ ಸಾಮೂಹಿಕ ಬುದ್ಧಿವಂತಿಕೆಯ ಪ್ರದರ್ಶನವಾಗಿದೆ. ಹವಾಮಾನ ಬದಲಾವಣೆಯ ಸವಾಲನ್ನು ಪ್ರತೀ ರಾಷ್ಟ್ರಗಳೂ ಸ್ವೀಕರಿಸಿ ಪರಿಹಾರದ ಕಡೆ ಕೆಲಸ ಹೇಗೆ ಮಾಡಬಹುದು ಎಂಬುದನ್ನು ಪ್ಯಾರಿಸ್ ಒಪ್ಪಂದದ ಮೂಲಕ ತೋರಿಸಿಕೊಟ್ಟಿವೆ ಎಂದು ಪ್ರಧಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಎರಡು ವಾರಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ ನಂತರ 195 ದೇಶಗಳು ಐತಿಹಾಸಿಕ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿವೆ.